ಕಳ್ಳರ ಹಾವಳಿಗೆ ಕಂಗಾಲಾದ ಜನತೆಕನ್ನಡಪ್ರಭ ವಾರ್ತೆ ವಿಜಯಪುರ ದರೋಡೆಕೋರರ ಅಟ್ಟಹಾಸಕ್ಕೆ ಓರ್ವ ಬಲಿಯಾಗಿದ್ದರೂ ಗಡಿ ಜಿಲ್ಲೆ ವಿಜಯಪುರದಲ್ಲಿ ಕಳ್ಳರು ಹಾಗೂ ದರೋಡೆಕೋರರ ಹಾವಳಿ ನಿಲ್ಲುತ್ತಿಲ್ಲ. ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ ನಾವು ರಂಗೋಲಿ ಕೆಳಗೆ ನುಗ್ಗುತ್ತೇವೆ ಎನ್ನುತ್ತಿದ್ದಾರೆ ದರೋಡೆಕೋರರು. ಖಾಕಿಗಳಿಗೆ ನಿರಂತರವಾಗಿ ಚಳ್ಳೆಹಣ್ಣು ತಿನ್ನಿಸುತ್ತಿರುವ ಅಂತರಾಜ್ಯದ ಕಳ್ಳರು, ನಿತ್ಯ ಹಾವಳಿಯನ್ನು ಮುಂದುವರಿಸಿದ್ದಾರೆ.