ಅಪರಾಧ ಕೃತ್ಯ ನಿಯಂತ್ರಿಸಲಿದೆ ಭಗವದ್ಗೀತೆಕನ್ನಡಪ್ರಭ ವಾರ್ತೆ ವಿಜಯಪುರ ಇತ್ತೀಚೆಗೆ ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಜನರ ಮಾನಸಿಕತೆ ಸುಧಾರಿಸಬೇಕಿದೆ. ಅಪರಾಧ ಕೃತ್ಯಗಳು ನಡೆಯದಂತೆ ಪರಿವರ್ತನೆಯನ್ನು ಭಗವದ್ಗೀತೆ ತರುತ್ತದೆ. ಕಾಮ, ಕ್ರೋಧಗಳನ್ನು ನಿಯಂತ್ರಣದಲ್ಲಿರುವ ಕುರಿತು ಭಗವದ್ಗೀತೆ ಕಲಿಸಲಿದೆ. ಈ ಚಿಂತನೆಗಳಿಂದ ಭಗವದ್ಗೀತೆ ಅಭಿಯಾನ ಶುರುವಾಗಿದೆ. 2007ರಿಂದ ಅಭಿಯಾನ ನಡೆಯುತ್ತಿದ್ದು, ಈ ಬಾರಿ ವಿಜಯಪುರದಲ್ಲಿ 17ನೇ ರಾಜ್ಯಮಟ್ಟದ ಅಭಿಯಾನ ನಡೆದಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.