ವಚನ ತಾತ್ವಿಕತೆಯ ದಿಕ್ಕು ತಪ್ಪಿಸುವ ಕೆಲಸ ವಿಪರ್ಯಾಸ: ರವೀಶ್ ಕ್ಯಾತನಬೀಡು
Apr 27 2025, 01:33 AM IST ಚಿಕ್ಕಮಗಳೂರು, ವಚನ ತತ್ತ್ವವನ್ನು ತಿಳಿದುಕೊಳ್ಳುವ ಹಂಬಲ ಇದ್ದರೆ ಸಾಲದು, ಅದನ್ನು ತಿಳಿದುಕೊಳ್ಳುವ ಸರಿಯಾದ ಮಾರ್ಗ ಹಿಡಿಯದ ಹೊರತು ಅದು ಸಾಧ್ಯವಿಲ್ಲ. ತಪ್ಪು ದಾರಿ ಹಿಡಿದು ಬಲು ದೂರ ಬಂದಾಗಿದೆ. ಅದೇ ದಾರಿಯಲ್ಲಿಯೇ ಮುಂದುವರಿಯುತ್ತೇನೆ ಮತ್ತು ವಚನ ಮಾರ್ಗದ ತತ್ವದ ದಾರಿಯನ್ನೇ ಹಿಡಿಯುತ್ತೇನೆ ಎಂದರೆ ಆಗದು. ಸರಿಯಾದುದ್ದನ್ನು ದಕ್ಕಿಸಿಕೊಳ್ಳಬೇಕಾದರೆ ಸರಿಯಿಲ್ಲದ ದಾರಿಯನ್ನು ತ್ಯಜಿಸಿ, ಸರಿಯಾದ ದಾರಿ ಹಿಡಿಯಬೇಕಾದದ್ದು ಅನಿವಾರ್ಯ ಎಂದು ಸಾಹಿತಿ ರವೀಶ್ ಕ್ಯಾತನಬೀಡು ಹೇಳಿದರು.