ಒಳಗಿನ ಮನಸ್ಸು ಶುದ್ಧವಾಗಿಟ್ಟುಕೊಂಡು ಕೆಲಸ ಮಾಡಿ

Jul 16 2025, 12:45 AM IST
ನಮ್ಮ ಒಳಗಿನ ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಸಮಾಜದಲ್ಲಿ ಉತ್ತಮ ಕೆಲಸ ಮಾಡಬೇಕೆಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಠಾಧೀಶರಾದ ಶ್ರೀ ನಿರ್ಮಾಲನಂದನಾಥ ಸ್ವಾಮೀಜಿ ತಿಳಿಸಿದರು. ಸೂರ್ಯನ ಬೆಳಕಿನಿಂದಲೇ ದಿನದ ಎಲ್ಲಾ ಚಟುವಟಿಕೆಗಳು ಪ್ರಾರಂಭವಾಗುತ್ತದೆ. ನಮಗೆ ಸೂರ್ಯ ಚಂಧ್ರ ಬಂದು ಹೋಗುವುದರ ಬಗೆ ಗಮನವಿಲ್ಲ. ಯಾವುದು ಬಂದು ಬೇಗ ಹೊರಟು ಹೋಗುತ್ತದೆ ಅದರ ಬಗ್ಗೆ ಗಮನ ಹೆಚ್ಚು ಇರುತ್ತದೆ ಅಶಾಶ್ವತೆ ಕಡೆ ನಮ್ಮ ಮನಸ್ಸು,ಭಾವ ಇರುತ್ತದೆ ಎಂದರು. ಶಾಶ್ವತ ಇರುವ ಕಡೆ ಗಮನವೊಂದೆಯಲ್ಲ ನಮ್ಮ ಭಾವ ಇರಬೇಕು. ಆದರೇ ಇದನ್ನ ಭಾವಿಸುವುದು ಯಾರು? ನಮ್ಮ ಒಳಗಿನ ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಸಮಾಜದಲ್ಲಿ ಉತ್ತಮ ಕೆಲಸ ಮಾಡಬೇಕೆಂದು ತಿಳಿಸಿದರು.