ಹಾಸನ ಜಿಲ್ಲೆಯಲ್ಲಿ ಕೊರೋನಾ ಪರೀಕ್ಷೆ
May 28 2025, 12:28 AM ISTಎಲ್ಲೆಡೆ ಕೋವಿಡ್ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಬೆಡ್ಗಳ ಮತ್ತು ಇತರೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬುಧವಾರದಿಂದ ಕೊರೋನಾ ಪರೀಕ್ಷೆ ಶುರುವಾಗಲಿದ್ದು, ಯಾರೂ ಕೂಡ ಭಯಪಡದೇ ಮುನ್ನೆಚರಿಕೆ ಕ್ರಮವನ್ನು ಅನುಸರಿಸಬೇಕೆಂದು ಸಂಸದ ಶ್ರೇಯಸ್ ಎಂ. ಪಟೇಲ್ ಸಲಹೆ ನೀಡಿದರು. ಯಾರು ಆತಂಕಕ್ಕೆ ಒಳಗಾಗುವುದು ಬೇಡ. ಮುನ್ನೆಚರಿಕ ಕ್ರಮವಾಗಿ ಎಲ್ಲರೂ ಮಾಸ್ಕ್ ಧರಿಸಿ, ಸ್ಯಾನಿಟೇಸರ್ ಹಾಕುವುದು, ಕೈಯನ್ನು ಶುದ್ಧವಾಗಿ ತೊಳೆದುಕೊಂಡು ಕೋವಿಡ್ ಮಾನದಂಡವನ್ನು ಸರ್ಕಾರದವರು ಏನು ಸೂಚಿಸಿದ್ದಾರೆ ಅದನ್ನ ಪಾಲಿಸಿದರೇ ಖಂಡಿತವಾಗಿಯೂ ಈ ಸಂಕಷ್ಟದಿಂದ ನಾವು ಪಾರಾಗಬಹುದು ಎಂದರು.