ಪಿಒಕೆ ಕೈತಪ್ಪಿಹೋಗಲು ನೆಹರೂ ಕಾರಣ: ಮೋದಿ ಪರೋಕ್ಷ ಟೀಕೆ
May 28 2025, 12:43 AM ISTದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಮಾತು ಕೇಳಿದ್ದರೆ ಇಂದು ಕಾಶ್ಮೀರ ವಿಷಯ ಇತ್ಯರ್ಥ ಆಗಿರುತ್ತಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ಸರ್ದಾರ್ ಪಟೇಲ್ ಅವರು ಕಠಿಣ ನಿಲುವು ತಳೆದಿದ್ದರು, ದೇಶ ವಿಭಜನೆಯಾದ ಬಳಿಕ ನಡೆದ ಪಾಕ್ ಜತೆಗಿನ ಮೊದಲ ಯುದ್ಧದ ವೇಳೆ ಪಿಒಕೆ ವಾಪಸ್ ಆಗುವವರೆಗೆ ಸೇನಾ ಕಾರ್ಯಾಚರಣೆ ನಿಲ್ಲಿಸಬಾರದು ಎಂದು ಅವರ ನಿಲುವಾಗಿತ್ತು. ಆದರೆ, ಆಗಿನ ನಾಯಕತ್ವ ಅದನ್ನು ನಿರ್ಲಕ್ಷ್ಯ ಮಾಡಿತು ಎಂದು ಜವಾಹರ್ ಲಾಲ್ ನೆಹರೂ ಹೆಸರೆತ್ತದೆ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.