ನಾ.ಡಿಸೋಜರಿಂದ ಸಾರ್ವಕಾಲಿಕ ಗಟ್ಟಿತನದ ಸಾಹಿತ್ಯ ರಚನೆ
Jan 01 2024, 01:15 AM ISTಸಾಹಿತಿ, ಲೇಖಕ ತನ್ನ ದೇಶ, ಪರಿಸರದ ಸ್ಪಂದನೆ ಅಕ್ಷರ ಮೂಲಕ ಸ್ಪಂದಿಸುತ್ತಾನೆ. ಇಂಥ ಮಾತಿಗೆ ಸಾಗರದ ಹಿರಿಯ ಸಾಹಿತಿ ನಾ.ಡಿಸೋಜ ಸಾಧನೆ ಗಮನೀಯ. ದ್ವೀಪ ಕಾದಂಬರಿ ಮೂಲಕ ದೇಶದ ಗಮನ ಸೆಳೆದಿದ್ದ ಅವರು ಈಗ ಸಮಗ್ರ ಕಾದಂಬರಿಗಳ ಸಂಪುಟ ಆರು ಸಾವಿರ ಪುಟಗಳ ಕೃತಿ ಮೂಲಕ ಮತ್ತೆ ಸಾಹಿತ್ಯಪ್ರಿಯರ ಮನಸೆಳೆದಿದ್ದಾರೆ. ನಾಡೋಜ, ವಿದ್ವಾಂಸ ಡಾ.ಹಂಪ ನಾಗರಾಜಯ್ಯ ಅವರು ನಾ.ಡಿಸೋಜ ಸರ್ವಕಾಲಕ್ಕೂ ಸಲ್ಲುವ ಗಟ್ಟಿತನದ ಸಾಹಿತಿ ಎಂದು ಸಮಾರಂಭದಲ್ಲಿ ಹೇಳಿರುವುದು ಗಮನೀಯ.