ಮಲೆನಾಡ ಅರಣ್ಯ ಸಮಸ್ಯೆ ಮರೆತ ಜನಪ್ರತಿನಿಧಿಗಳು: ತೀನಶ್ರೀ ಬೇಸರ
Feb 04 2024, 01:37 AM ISTಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಸಚಿವ ಮಧು ಬಂಗಾರಪ್ಪ ಹಾಗೂ ಸಾಗರ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಮಲೆನಾಡಿನ ಅರಣ್ಯ ಸಮಸ್ಯೆ, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಗೆದ್ದಿದ್ದಾರೆ. ಆದರೆ, ಈಗ ಸಮಸ್ಯೆ ಕುರಿತು ಗಮನಹರಿಸದೇ ಇರುವುದು ಬೇಸರದ ಸಂಗತಿ ಎಂದು ಮಲೆನಾಡು ಭೂ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಸಾಗರದಲ್ಲಿ ಆರೋಪಿಸಿದ್ದಾರೆ.