ಉಡುಪಿ: ಮುಂಗಾರು ಪೂರ್ವ ಮಳೆಗೆ 15.66 ಲಕ್ಷ ರು. ನಷ್ಟ
Apr 16 2025, 12:47 AM ISTಸೋಮವಾರ ಸಂಜೆ ಸುರಿದ ಅನಿರೀಕ್ಷಿತ ಗಾಳಿ, ಮಳೆಗೆ ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕ ಹಾನಿಯಾಗಿದೆ. ಉಡುಪಿಯ 2 ಮನೆಗಳಿಗೆ ಸಂಪೂರ್ಣ ಹಾನಿಯಾಗಿವೆ. ಜೊತೆಗೆ ಕುಂದಾಪುರ ತಾಲೂಕಿನ ರೈತರೊಬ್ಬರ ತೋಟಕ್ಕೂ ಹಾನಿಯಾಗಿದೆ. ಈ ಮುಂಗಾರುಪೂರ್ವ ಮಳೆಗೆ ಜಿಲ್ಲೆಯಲ್ಲಿ ಒಟ್ಟು 15,66,000 ರು.ಗಳಷ್ಟು ನಷ್ಟ ಸಂಭವಿಸಿದೆ.