• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಅಟ್ರಾಸಿಟಿ ಕೇಸ್‌ ದಾಖಲಾದ ವಾರದೊಳಗೆ ಪರಿಹಾರ ನೀಡಿ: ದಲಿತ ಮುಖಂಡರ ಆಗ್ರಹ

Dec 15 2024, 02:05 AM IST
ಸಭೆಯಲ್ಲಿ ದಲಿತ ಮುಖಂಡರಿಂದ ಕೇಳಿ ಬಂದ ಸಮಸ್ಯೆ, ದೌರ್ಜನ್ಯ, ದಬ್ಬಾಳಿಕೆಗಳ ಮಾತಿಗೆ ಡಿಎಸ್‌ಪಿ ಲಕ್ಷ್ಮಯ್ಯ ಪ್ರತಿಕ್ರಿಯಿಸಿ, ಪ್ರತಿ ಮೂರು ತಿಂಗಳಿಗೊಮ್ಮೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಎಸ್‌ಸಿ ,ಎಸ್‌ಟಿ ಜನರ ಸಮಸ್ಯೆ ಆಲಿಸಿ, ಪರಿಹಾರ ಕಂಡು ಹಿಡಿಯಲಾಗುವುದು ಎಂದು ಭರವಸೆ ನೀಡಿದರು.

ಒಳ ಮೀಸಲಾತಿ: ದಲಿತ ಮುಖಂಡರ ತಮಟೆ ಚಳುವಳಿ

Dec 15 2024, 02:01 AM IST
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಪಟ್ಟಣದಲ್ಲಿ ತಮಟೆ ಚಳುವಳಿ ನಡೆಸಿದರು. ಈ ವೇಳೆ ಬಸವೇಶ್ವರ ವೃತ್ತದಿಂದ ಶಾಸಕ ಹಾಗೂ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಮನೆ ಮುಂದೆ ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದು, ಬಳಿಕ, ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸಮಸ್ಯೆ ಬಗ್ಗೆ ಕೇಳಿದ್ರೇ ಶಾಸಕರಿಗೆ ಛಾಡಿ ಹೇಳ್ತಾರೇ: ದಲಿತ ಮುಖಂಡರು

Dec 14 2024, 12:47 AM IST
ತಾಲೂಕಿನ ದಲಿತರ ಸಮಸ್ಯೆಗಳನ್ನ ಪರಿಹರಿಸುವಲ್ಲಿ ತಾಲೂಕಿನ ಕೆಲವು ಅಧಿಕಾರಿಗಳು ವಿಫಲರಾಗಿದ್ದಾರೆ. ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ದಲಿತರ ಕುಂದುಕೊರತೆ ಸಭೆಯನ್ನ ಮಾಡಬೇಕು ಎಂದು ದಲಿತ ಮುಖಂಡರು ಒತ್ತಾಯ ಮಾಡಿದರು. ಕೊರಟಗೆರೆಯಲ್ಲಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

ದಲಿತ ಸಂಘರ್ಷ ಸಮಿತಿಯಿಂದ ಕಾಲ್ನಡಿಗೆ ಜಾಥಾ

Dec 10 2024, 12:32 AM IST
ನಿವೇಶನ ರಹಿತರಿಗೆ ನಿವೇಶನ ಹಕ್ಕುಪತ್ರ, ಮೂಲಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸುದೀರ್ಘ ಆರು ಗಂಟೆಗಳ, 13 ಕಿ.ಮೀ. ಕಾಲ್ನಡಿಗೆ ಜಾಥಾ ನಡೆಯಿತು.

ಕಂಡಕ್ಟರ್‌ ಸಾವು : ಕ್ರಮಕ್ಕೆ ಆಗ್ರಹಿಸಿ ದಲಿತ ಪರ ಸಂಘಟನೆಗಳ ಪ್ರತಿಭಟನೆ

Dec 05 2024, 12:31 AM IST
ಚಿಕ್ಕಮಗಳೂರು, ಕೆ.ಎಸ್.ಆರ್.ಟಿ.ಸಿ. ನಿರ್ವಾಹಕನ ಸಾವಿಗೆ ಕಾರಣವಾಗಿರುವ ಡಿಪೋ ಮ್ಯಾನೇಜರ್ ಹಾಗೂ ಮ್ಯಾಕಾನಿಕ್‌ ಮುಖ್ಯಸ್ಥರ ಅಮಾನತ್ತಿಗೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಮುಖಂಡರು ಬುಧವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.

ದಲಿತ, ಶೋಷಿತರ ಅಂತರಂಗ ಅರಿವಿನ ನುಡಿಗಳೇ ಶರಣ ಸಾಹಿತ್ಯ

Dec 04 2024, 12:33 AM IST
ಬಂಡವಾಳಶಾಹಿಗಳ ಸಾಮ್ರಾಜ್ಯದಿಂದ ದೂರವಿದ್ದ ದಲಿತ, ಶೋಷಿತ ವ್ಯಕ್ತಿಗಳು ತಮ್ಮ ಅಂತರಂಗದ ಅರಿವಿನ ಮೂಲಕ ತಾಯಿನುಡಿಯ ಭಾಷೆಯಿಂದ ಹೊರಹಾಕಿದ ನುಡಿಗಳೇ ಶರಣ ಸಾಹಿತ್ಯ. ಜನಸಾಮಾನ್ಯರ ನೋವು ನಲಿವುಗಳಿಗೆ, ದುಡಿಯುವ ವರ್ಗಗಳ ಧ್ವನಿಯಾಗಿ ಅವರ ಅಪೇಕ್ಷೆ, ಅಗತ್ಯತೆಗಳಿಗೆ ದೃಢ ನಿರ್ಧಾರವನ್ನು ಶರಣ ಸಾಹಿತ್ಯ ಒದಗಿಸಿದೆ ಎಂದು ದಾವಣಗೆರೆ ಜಿಲ್ಲಾ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಅಭಿಪ್ರಾಯಪಟ್ಟಿದ್ದಾರ.ಎ

ದಲಿತ ಸೂರ್ಯ ಅಂಬೇಡ್ಕರ್ ಎಸ್‌ಸಿ ಕಾಲೋನಿಗೇ ಸೀಮಿತವಾಗದಿರಲಿ: ಹುನಸನಹಳ್ಳಿ ವೆಂಕಟೇಶ್

Nov 28 2024, 12:35 AM IST
ಸಂವಿಧಾನಕ್ಕೂ ಮುಂಚೆ ಪೋಷಕರು ತಮ್ಮ ಮಕ್ಕಳ ಮುಂದಿನ ಜೀವನದ ಬಗ್ಗೆ ಕುಲಕಸುಬಿನ ಮೂಲಕ ಯೋಚನೆ ಮಾಡಿ ಕನಸನ್ನು ಕಾಣುತ್ತಿದ್ದರು. ಆದರೆ ಅಂಬೇಡ್ಕರ್‌ರವರು ಸಂವಿಧಾನವನ್ನೂ ನೀಡಿದ ನಂತರ ಕುಲಕಸುಬಲ್ಲದೇ ಮೀಸಲಾತಿಯಲ್ಲಿಯೂ ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಎಲ್ಲರೂ ಉತ್ತಮ ಸ್ಥಾನ ಪಡೆಯಲು ಸಹಕಾರವಾಯಿತು.

ಅಂಬೇಡ್ಕರ್‌ರಿಂದ ವಿಶ್ವವೇ ಮೆಚ್ಚುವ ಸಂವಿಧಾನ ಅರ್ಪಣೆ: ದಲಿತ ಮುಖಂಡ ವೆಂಕಟರಮಣಸ್ವಾಮಿ

Nov 28 2024, 12:34 AM IST
ಅಂಬೇಡ್ಕರ್‌ ಅವರು ತಮ್ಮ ಸಂಕಷ್ಟದ ನಡುವೆಯೂ ಪ್ರಪಂಚದಲ್ಲಿ 7ನೇ ಸ್ಥಾನ ಹೊಂದಿರುವ ಭಾರತದಂತಹ ಬೃಹತ್‌ ರಾಷ್ಟ್ರಕ್ಕೆ ವಿಶ್ವವೇ ಮೆಚ್ಚುವ ಸಂವಿಧಾನ ಬರೆದು ಲೋಕಾರ್ಪಣೆ ಮಾಡಿದ್ದಾರೆ ಎಂದು ಅಂಬೇಡ್ಕರ್ ಪುರಸ್ಕೃತ, ಹಿರಿಯ ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಅಭಿಪ್ರಾಯಪಟ್ಟರು. ಚಾಮರಾಜನಗರದಲ್ಲಿ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದರು.

ದಲಿತ ಸಮುದಾಯಗಳು ಹೆಚ್ಚು ಸಮಸ್ಯೆ ಎದುರಿಸುವಂತಾಗಿದೆ

Nov 25 2024, 01:02 AM IST
ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯಗಳು ಹೆಚ್ಚು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದೆ. ಶೋಷಣೆ ಅಸಮಾನತೆ ವಿರುದ್ಧ, ಜಾತಿ ಧರ್ಮಗಳ ವಿರುದ್ಧ ಪ್ರಶ್ನೆ ಮಾಡಲು ಹುಟ್ಟಿದ್ದೇ ದಲಿತ ಚಳವಳಿ. ಒಂದು ಕಡೆ ಸಂವಿಧಾನ ಮತ್ತೊಂದು ಕಡೆ ಅಲಿಖಿತ ಸಂವಿಧಾನ ಇದೆ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಸಂವಿಧಾನ ಇದ್ದರೂ ಸಹ ಧಾರ್ಮಿಕ ಭಯೋತ್ಪಾದನೆ ಅಂತಹ ಅಲಿಖಿತ ಸಂವಿಧಾನಗಳು ದಾಳಿ ಮಾಡಿ ನಮ್ಮನ್ನು ಕುಗ್ಗಿಸುವಂತೆ ಮಾಡುತ್ತಿದೆ ಎಂದು ಅಂಬೇಡ್ಕರ್‌ ವಾದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಬೇಸರ ವ್ಯಕ್ತಪಡಿಸಿದರು.

ದಲಿತ ಚಳುವಳಿಗಳ ಬಗ್ಗೆ ಹಗುರವಾಗಿ ಮಾತನಾಡುವವರ ಬಗ್ಗೆ ಎಚ್ಚರವಹಿಸಿ: ಮಾವಳ್ಳಿ ಶಂಕರ್‌

Nov 25 2024, 01:01 AM IST
ಚಿಕ್ಕಮಗಳೂರು, ದಲಿತ ಚಳುವಳಿಗಳ ಬಗ್ಗೆ ಹಗುರವಾಗಿ ಮಾತನಾಡುವವರ ಬಗ್ಗೆ ಎಚ್ಚರವಹಿಸಿ, ಆರೋಗ್ಯಕರ ರಚನಾತ್ಮಕ ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಚಳುವಳಿಗಳನ್ನು ಸುಭದ್ರವಾಗಿ ಕಟ್ಟಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
  • < previous
  • 1
  • ...
  • 9
  • 10
  • 11
  • 12
  • 13
  • 14
  • 15
  • 16
  • 17
  • ...
  • 31
  • next >

More Trending News

Top Stories
ಹೊಸಬರ ಸಂತೈಸುವ ಬೆಚ್ಚಗಿನ ಕೈಯೊಂದು ಇಲ್ಲವಾದ ಸಂಕಟ! ಅಪ್ಪು ಇಲ್ಲದ ನಾಲ್ಕು ವರ್ಷಗಳು
ಬಿಹಾರ ಚುನಾವಣೆ ಬಳಿಕ ರಾಜ್ಯಕ್ಕೆ ರಾಹುಲ್‌ ಗಾಂಧಿ : ಬೇಳೂರು ಗೋಪಾಲಕೃಷ್ಣ
ಎಸಿ ಬಸ್‌ಗಳಲ್ಲಿ ಅಗ್ನಿ ಸುರಕ್ಷತಾ ಆಡಿಟ್‌ಗೆ ಮುಂದಾದ ನಿಗಮ
ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ರಂಗಸನ್ಸ್ ಏರೋಸ್ಪೇಸ್ ಘಟಕಕ್ಕೆ ಎಂಬಿಪಾ ಚಾಲನೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved