ಅರಕಲಗೂಡಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
Oct 18 2024, 12:09 AM ISTಜಯಂತಿ ಉತ್ಸವಗಳು ಜಾಗೃತಿ, ಜನಾಂಗೀಯ ತೇರನ್ನು ಎಳೆಯುವ, ಉದಾತ್ತ ಚಿಂತನೆ, ಮಂಥನಗಳನ್ನು ಮುಂದಿನ ಮನ್ವಂತರಕ್ಕೆ ಕೊಂಡೊಯ್ಯುವ ಮಾನವ ಸೇತುವೆಯಾಗಿದೆ ಎಂದು ಪ್ರಧಾನ ಭಾಷಣಕಾರ ಸತೀಶ್ ಅಲ್ಲಾಪಟ್ಟಣ ತಿಳಿಸಿದರು. ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಯಂತಿ ಉತ್ಸವಗಳನ್ನು ಬಹಳ ಉತ್ಸುಕತೆಯಿಂದ ಆಚರಿಸುತ್ತೇವೆ. ಜನಾಂಗದ ಪ್ರೇರಣೆ, ಪೋಷಣೆ ಇಲ್ಲದಿದ್ದರೆ ಯಾವ ಆಚರಣೆಗಳು ಯಶಸ್ವಿಯಾಗುವುದಿಲ್ಲ. ಇದಕ್ಕೆ ಜನಾಂಗೀಯ ಸಹಾಭಾಗಿತ್ವ ಮುಖ್ಯ ಎಂದರು.