ಸರ್ಕಾರಿ ಶಾಲೆಗಳಲ್ಲಿ ದೇಶದ ಭವಿಷ್ಯ ಅಡಗಿದೆ: ಚಲನಚಿತ್ರ ನಿರ್ದೇಶಕ ಅರುಣ್ ಕುಮಾರ್ ಕರಡಿಗಾಲ
Jun 21 2024, 01:07 AM ISTಇಲ್ಲಿನ ಶಿಕ್ಷಣ ಪ್ರಗತಿ ಕಾಣಬೇಕಿದೆ. ಪ್ರತಿ ಮಗುವಿಗೆ ಅಗತ್ಯ ಕಲಿಕಾ ಸಾಮಾಗ್ರಿಗಳು ದೊರೆತು ಉತ್ತಮ ಕಲಿಕೆಯತ್ತ ಸಾಗಬೇಕಿದೆ ಎಂದು ಚಲನಚಿತ್ರ ನಿರ್ದೇಶಕ ಹಾಗೂ ಬರಹಗಾರ ಅರುಣ್ಕುಮಾರ್ ಕರಡಿಗಾಲ ಅಭಿಪ್ರಾಯಪಟ್ಟರು. ಆಲೂರು ತಾಲೂಕಿನ ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಪ್ಪತ್ತೈದು ಮಕ್ಕಳಿಗೆ ತಲಾ ಹತ್ತು ನೋಟ್ಸ್ ಹಾಗೂ ಐದೈದು ಪೆನ್ಗಳನ್ನು ನೀಡಿ ಮಾತನಾಡಿದರು.