ಅಸಂಸದೀಯ ಪದ ಬಳಕೆ: ಖರ್ಗೆ ವಿವಾದನೂತನ ಶಿಕ್ಷಣ ನೀತಿ (ಎನ್ಇಪಿ) ಜಾರಿ ಮಾಡದ ತಮಿಳುನಾಡು ಸರ್ಕಾರವನ್ನು ಅನಾಗರಿಕ, ಅಪ್ರಾಮಾಣಿಕ ಎಂದೆಲ್ಲ ಟೀಕೆ ಮಾಡಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಅಸಂಸದೀಯ ಪದ ಬಳಸಿದ್ದು ರಾಜ್ಯಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ಆಕ್ರೋಶ ಹಾಗೂ ಉಪಸಭಾಪತಿ ಹರಿವಂಶ್ ಅವರ ಅಸಮಾಧಾನದ ಬಳಿಕ ಖರ್ಗೆ ಕ್ಷಮೆಯಾಚಿಸಿದರು.