ಶೃಂಗೇರಿ: ಗಾಳಿ ಮಳೆ ಆರ್ಭಟಕ್ಕೆ ಕುಸಿಯುತ್ತಿದೆ ಗುಡ್ಡ, ಭೂಮಿಶೃಂಗೇರಿ, ತಾಲೂಕಿನಾದ್ಯಂತ ಗುರುವಾರವೂ ಗಾಳಿ ಮಳೆ ಆರ್ಭಟದಿಂದ ಗುಡ್ಡ, ಭೂಮಿ ಕುಸಿತ ಮುಂದುವರಿದು ಜನ ಕಂಗಾಲಾಗಿರುವ ನಡುವೆ ಕೆರೆಕಟ್ಟೆ, ಕಿಗ್ಗಾ, ನೆಮ್ಮಾರು, ಮೆಣಸೆ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಳೆದೆರೆಡು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಕಗ್ಗತ್ತಲಲ್ಲಿ ದಿನ ದೂಡುವಂತಾಗಿದೆ.