ಹಾಡುಗಾರಿಕೆ, ಮೃದಂಗ ಕಾರ್ಯಾಗಾರ ಸಮಾರೋಪಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತಶಿಕ್ಷಕ, ವೀಣಾವಾದಿನಿಯ ನಿರ್ದೇಶಕ ಹಾಗೂ ಗುರು ಯೋಗೀಶ ಶರ್ಮ ಬಳ್ಳಪದವು ಗಾಯನದಲ್ಲಿ ಮಾರ್ಗದರ್ಶನ ನೀಡಿದರು. ಅವರ ಪಾಠಗಳು ಕೇವಲ ಶಾಸ್ತ್ರೀಯತೆಗಷ್ಟೇ ಸೀಮಿತವಾಗಿರದೆ, ರಾಗದ ಆಂತರಿಕ ಭಾವವನ್ನೂ, ಭಕ್ತಿಯನ್ನೂ, ಕೃತಿಗಳ ಒಳಗಿರುವ ಭಾವ ಶ್ರೀಮಂತಿಕೆಯನ್ನೂ ಸ್ಪಷ್ಟವಾಗಿ ಹರಡಿದವು.