ಎನ್ಐಟಿಕೆ ಬೀಚ್: ಇಬ್ಬರು ಸಮುದ್ರಪಾಲು, ಓರ್ವನ ಮೃತದೇಹ ಪತ್ತೆಸುರತ್ಕಲ್ ಎನ್ಐಟಿಕೆ ಬೀಚ್ನಲ್ಲಿ ಇಬ್ಬರು ಬಾಲಕರು ಸಮುದ್ರಪಾಲಾಗಿ, ಮತ್ತಿಬ್ಬರು ರಕ್ಷಿಸಲ್ಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಮುಂಬೈಯ ವಿವೇಕ್ ಎಂಬವರ ಪುತ್ರ ಧ್ಯಾನ್ (18) ಹಾಗೂ ಮುಂಬೈಯ ಉಮೇಶ್ ಕುಲಾಲ್ ಅವರ ಪುತ್ರ ಹನೀಶ್ ಕುಲಾಲ್ (15) ಸಮುದ್ರಪಾಲಾದವರು. ಧ್ಯಾನ್ ಮೃತದೇಹ ಪತ್ತೆಯಾಗಿದ್ದು, ನಾಪತ್ತೆಯಾದ ಹನೀಶ್ಗೆ ಹುಡುಕಾಟ ನಡೆದಿದೆ.