ಮಳೆಗಾಗಿ ರೈತರಿಂದ ಅಂಬಲಿ ಸಂತರ್ಪಣೆಕನ್ನಡಪ್ರಭ ವಾರ್ತೆ ನರಗುಂದಪಟ್ಟಣದ ಸಿದ್ದನಬಾವಿ ಓಣಿಯ ರೈತರು ಮಳೆಗಾಗಿ ಶ್ರೀ ಯಲ್ಲಮ್ಮದೇವಿಗೆ ಪೂಜೆ ಸಲ್ಲಿಸಿ, ಅಂಬಲಿ ಪ್ರಸಾದವನ್ನು ತಯಾರಿಸಿ ಮಾರುಕಟ್ಟೆ ಪ್ರದೇಶದಲ್ಲಿನ ಗಾಂಧಿ ವೃತ್ತ ಮತ್ತು ಬಸವೇಶ್ವರ ವೃತ್ತದಲ್ಲಿ ಜನರಿಗೆ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ರೈತ ಶೇಖಪ್ಪ ಜಗದ ಮಾತನಾಡಿ, ಹಿಂಗಾರಿ ಹಂಗಾಮಿನಲ್ಲಿ ಕಡಲೆ, ಜೋಳ ಇತರ ಬೀಜಗಳನ್ನು ಭೂಮಿಯಲ್ಲಿ ಬಿತ್ತನೆ ಮಾಡಲಾಗಿದೆ. ಆದರೆ ಮಳೆಯಾಗದೇ ಇದ್ದ ಕಾರಣ ಕಾಳಗಳು ಮೊಳಕೆ ಒಡೆಯುತ್ತಿಲ್ಲ.