ಶಿರೋಳ ತೋಂಟದಾರ್ಯ ಮಠದಲ್ಲಿ ಏ. 3ರಿಂದ ಬಸವ ಪುರಾಣ ಪ್ರವಚನಧಾರ್ಮಿಕ ಕಾರ್ಯಕ್ರಮ ಹಾಗೂ ಜಾತ್ರೆಗಳು ಪಾವಿತ್ರ್ಯತೆಯಿಂದ ಕೂಡಿರಲಿ. ಭಯ, ಭಕ್ತಿಯಿಂದ ಬಸವ ಪುರಾಣ ಆಲಿಸೋಣ. ಅಲ್ಲಲ್ಲಿ ಕಾಲಹರಣ ಮಾಡದೇ ಯುವಕರ ಪಾಲ್ಗೊಳ್ಳುವಿಕೆ ಪ್ರವಚನದಲ್ಲಿ ಕಂಡುಬರಲಿ. ಜೂಜಾಟ, ಮದ್ಯಪಾನ ಸೇವನೆಗೆ ಜಾತ್ರೆಯಲ್ಲಿ ಅವಕಾಶ ಸಲ್ಲದು, ಗದ್ದುಗೆ ಸ್ಥಾಪನೆ ನಂತರ ಪೂಜೆ ಪದ್ಧತಿಗಳು ನಿತ್ಯವೂ ಶಾಸ್ತ್ರೋಕ್ತವಾಗಿ ನಡೆಯಬೇಕೆಂದು ತಾಲೂಕಿನ ಶಿರೋಳ ಶ್ರೀ ತೋಂಟದಾರ್ಯ ಮಠದ ಗದ್ದುಗೆ ಶಿಲಾ ಮಂಟಪ ಹಾಗೂ ಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷರಾದ ಶಾಸಕ ಸಿ.ಸಿ. ಪಾಟೀಲ ಹೇಳಿದರು.