ಸಾಧನೆ ಜತೆಗೆ ಹಿರಿಯರನ್ನು ಗೌರವಿಸುವುದು ನಮ್ಮ ಕರ್ತವ್ಯಗ್ರಾಮೀಣ ಪ್ರದೇಶದ ಕುಗ್ರಾಮದಲ್ಲಿ ಮಾರ್ಗದರ್ಶಕರಾಗಿ, ಸಲಹೆ ನೀಡುತ್ತಾ ಜತೆಗೆ ಎಚ್ಚರಿಕೆಯ ನುಡಿಗಳನ್ನಾಡುವ ಹಿರಿಯರು ಅಮೂಲ್ಯವಾದ ರತ್ನವಿದ್ದಂತೆ ಎಂದು ಚೇತನ್ ಜಿ.ಸಿ. ಅಭಿಪ್ರಾಯಪಟ್ಟರು. ಎಸ್ಎಸ್ಎಲ್ಸಿ, ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ, ಎಂಬಿಬಿಎಸ್, ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಐವರು ಹಿರಿಯ ಮಹಿಳೆಯರು, ಉತ್ತಮ ರೈತರಾದ ಜಯಣ್ಣ ಹಾಗೂ ಪರಮೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು ಮತ್ತು ಒಂದರಿಂದ ಐದನೇ ತರಗತಿ ವ್ಯಾಸಂಗ ಮಾಡುತ್ತಿರುವ ೨೨ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಪುಟ್ಟ ಮಕ್ಕಳಿಗೆ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿ ನೀಡಿ ಉತ್ತೇಜಿಸಲಾಯಿತು. ಜತೆಗೆ ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ನೀಡಲಾಯಿತು.