ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಮಹರ್ಷಿ ವಾಲ್ಮೀಕಿ ತಮ್ಮ ರಾಮಾಯಣ ಗ್ರಂಥದಲ್ಲಿ ಶ್ರೀ ವಿಷ್ಣುವಿನ ಅವತಾರಗಳಲ್ಲಿ ಒಂದಾದ ಶ್ರೀ ರಾಮನ ಮೂಲಕ ಮನುಕುಲಕ್ಕೆ ಪಿತೃ ವಾಕ್ಯ ಪರಿಪಾಲನೆ, ಅಧಿಕಾರದ ತ್ಯಾಗ, ಏಕ ಪತ್ನಿ ವ್ರತಸ್ಥ, ಸೀತಾ ದೇವಿಯ ಪಾವಿತ್ರ್ಯತೆ, ಆಂಜನೇಯ ಸ್ವಾಮಿಯ ಸ್ವಾಮಿ ನಿಷ್ಠೆ , ರಾವಣನ ಪರ ಸ್ತ್ರೀ ವ್ಯಾಮೋಹ, ರಾವಣನ ವಧೆಯ ಮೂಲಕ ರಾಕ್ಷಸ ಪ್ರವೃತ್ತಿಯ ಸಂಹಾರ, ತಾಯಿ ಮಾತು ಪರಿಪಾಲನೆ ಸೇರಿದಂತೆ ಹಲವು ಆದರ್ಶಗಳನ್ನು ಜಗತ್ತಿಗೆ ಅರ್ಥ ಮಾಡಿಸಿದ್ದಾರೆ, ಈ ನಿಟ್ಟಿನಲ್ಲಿ ರಾಕ್ಷಸ ಪ್ರವೃತ್ತಿ ಮಿತಿ ಮೀರಿದರೆ ವಿನಾಶ ನಿಶ್ಚಿತ ಎಂಬ ಸಂದೇಶವನ್ನು ಕೇವಲ ಭಾರತಕ್ಕಷ್ಟೇ ಅಲ್ಲ ಇಡೀ ಜಗತ್ತಿಗೆ ನೀಡಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.