• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ದೇವೇಗೌಡರು ವಾಲ್ಮೀಕಿ ಜನಾಂಗವನ್ನು ಎಸ್‌ಟಿಗೆ ಸೇರಿಸಲು ಶ್ರಮಿಸಿದ್ದರು
ಮಾಜಿ ಪ್ರಧಾನಿ ದಿ. ಚಂದ್ರಶೇಖರ್‌ ಅವರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಿನಂತಿಸಿ ವಾಲ್ಮೀಕಿ ಜನಾಂಗವನ್ನು ಎಸ್‌ಟಿ ವರ್ಗಕ್ಕೆ ಸೇರಿಸಲು ಶ್ರಮಿಸಿದ್ದರು. ಜತೆಗೆ ೧೮ ಶಾಸಕರು ಹಾಗೂ ೩ ಸಂಸದರು ಆಯ್ಕೆಯಾಗಲು ಸಾಧ್ಯವಾಗಿತ್ತು ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು. ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಾರ್ಶನಿಕರು ನೀಡಿರುವ ಮಹತ್ವದ ಕಾವ್ಯಗಳನ್ನು ಅರ್ಥ ಮಾಡಿಕೊಂಡು ತತ್ವಗಳನ್ನು ಅನುಸರಿಸುತ್ತಾ, ಸಹಬಾಳ್ವೆಯ ಜೀವನ ನಡೆಸಬೇಕಿದೆ ಎಂದರು.
ನಗರಸಭೆ ಕಾರ್ಯಾಚರಣೆ ಸ್ಥಳಕ್ಕೆ ರೇವಣ್ಣ ಭೇಟಿ
ನಗರಸಭೆ ವತಿಯಿಂದ ಬುಧವಾರ ಬೆಳ್ಳಂಬೆಳಗ್ಗೆ ಅಕ್ರಮ ಕಟ್ಟಡಗಳು ಹಾಗೂ ಒತ್ತುವರಿ ವಿರುದ್ಧ ನಗರಸಭೆ ಆಯುಕ್ತರು ತೆರವು ಕಾರ್ಯಾಚರಣೆ ನಡೆಸಿದ್ದರು. ಆದರೆ ಈ ಮೊದಲೇ ಯಾವುದೇ ನೋಟಿಸ್ ನೀಡದೆ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಸ್ಥಳೀಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒತ್ತುವರಿ ತೆರವು ಖಂಡಿಸಿ ಶಾಸಕ ಸ್ವರೂಪ್‌ ರಸ್ತೆ ಮಧ್ಯೆ ಧರಣಿ ಕೂತ ಸ್ಥಳಕ್ಕೆ ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ ಭೇಟಿ ನೀಡಿ ನಗರಸಭೆ ಆಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಒತ್ತುವರಿ ತೆರವು ಸ್ಥಳಕ್ಕೆ ಸಂಸದ ಶ್ರೇಯಸ್‌ ಭೇಟಿ
ತಣ್ಣೀರುಹಳ್ಳದ ಬಳಿ ಬುಧವಾರ ಒತ್ತುವರಿ ತೆರವು ಮಾಡಲಾದ ಸ್ಥಳಕ್ಕೆ ಗುರುವಾರ ಎಂಪಿ ಶ್ರೇಯಸ್ ಪಟೇಲ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂಗಡಿ ಮಾಲಿಕರ ಸಮಸ್ಯೆಗಳನ್ನು ಆಲಿಸಿದರು. ನೋಟಿಸ್ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ಮಾಡಿರುವುದು ತಪ್ಪು ನಿರ್ಧಾರ, ಯಾರು ಈ ರೀತಿ ಮಾಡಿದ್ದಾರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಂಥವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ
ಮಹರ್ಷಿ ವಾಲ್ಮೀಕಿ ತಮ್ಮ ರಾಮಾಯಣ ಗ್ರಂಥದಲ್ಲಿ ಶ್ರೀ ವಿಷ್ಣುವಿನ ಅವತಾರಗಳಲ್ಲಿ ಒಂದಾದ ಶ್ರೀ ರಾಮನ ಮೂಲಕ ಮನುಕುಲಕ್ಕೆ ಪಿತೃ ವಾಕ್ಯ ಪರಿಪಾಲನೆ, ಅಧಿಕಾರದ ತ್ಯಾಗ, ಏಕ ಪತ್ನಿ ವ್ರತಸ್ಥ, ಸೀತಾ ದೇವಿಯ ಪಾವಿತ್ರ್ಯತೆ, ಆಂಜನೇಯ ಸ್ವಾಮಿಯ ಸ್ವಾಮಿ ನಿಷ್ಠೆ , ರಾವಣನ ಪರ ಸ್ತ್ರೀ ವ್ಯಾಮೋಹ, ರಾವಣನ ವಧೆಯ ಮೂಲಕ ರಾಕ್ಷಸ ಪ್ರವೃತ್ತಿಯ ಸಂಹಾರ, ತಾಯಿ ಮಾತು ಪರಿಪಾಲನೆ ಸೇರಿದಂತೆ ಹಲವು ಆದರ್ಶಗಳನ್ನು ಜಗತ್ತಿಗೆ ಅರ್ಥ ಮಾಡಿಸಿದ್ದಾರೆ, ಈ ನಿಟ್ಟಿನಲ್ಲಿ ರಾಕ್ಷಸ ಪ್ರವೃತ್ತಿ ಮಿತಿ ಮೀರಿದರೆ ವಿನಾಶ ನಿಶ್ಚಿತ ಎಂಬ ಸಂದೇಶವನ್ನು ಕೇವಲ ಭಾರತಕ್ಕಷ್ಟೇ ಅಲ್ಲ ಇಡೀ ಜಗತ್ತಿಗೆ ನೀಡಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.
ವಿದ್ಯುತ್‌ ಶಾಕ್‌ನಿಂದ ಒಂಟಿ ಸಲಗ ಸಾವು
ಬಿಎಸ್‌ಎನ್‌ಎಲ್ ಟವರ್‌ಗೆ ೧೧ ಕೆವಿ ವಿದ್ಯುತ್ ಪೂರೈಸುವ ವಿದ್ಯುತ್ ಕಂಬಗಳಿಗೆ ಅಳವಡಿಸಿದ್ದ ಎಲೆಕ್ಟ್ರಿಕಲ್ ಡಿಯೋಲ್ ಅತ್ಯಂತ ಕೆಳಮಟ್ಟದಲ್ಲಿ ಇರುವುದ ಕಾಡಾನೆ ಸಾವಿಗೆ ಕಾರಣವಾಗಿದ್ದು, ಕಂಬಗಳನ್ನು ಬದಲಾವಣೆ ಮಾಡುವಂತೆ ಮನವಿ ಮಾಡಿದರು ನಿರ್ಲಕ್ಷ್ಯ ತೋರಿರುವ ವಿದ್ಯುತ್ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಕಳೆದ ಆರು ವರ್ಷಗಳಲ್ಲಿ ಹದಿನಾರು ಕಾಡಾನೆಗಳು ಮೃತಪಟ್ಟಿದ್ದು ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ.
ಅರಕಲಗೂಡಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಜಯಂತಿ ಉತ್ಸವಗಳು ಜಾಗೃತಿ, ಜನಾಂಗೀಯ ತೇರನ್ನು ಎಳೆಯುವ, ಉದಾತ್ತ ಚಿಂತನೆ, ಮಂಥನಗಳನ್ನು ಮುಂದಿನ ಮನ್ವಂತರಕ್ಕೆ ಕೊಂಡೊಯ್ಯುವ ಮಾನವ ಸೇತುವೆಯಾಗಿದೆ ಎಂದು ಪ್ರಧಾನ ಭಾಷಣಕಾರ ಸತೀಶ್‌ ಅಲ್ಲಾಪಟ್ಟಣ ತಿಳಿಸಿದರು. ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಯಂತಿ ಉತ್ಸವಗಳನ್ನು ಬಹಳ ಉತ್ಸುಕತೆಯಿಂದ ಆಚರಿಸುತ್ತೇವೆ. ಜನಾಂಗದ ಪ್ರೇರಣೆ, ಪೋಷಣೆ ಇಲ್ಲದಿದ್ದರೆ ಯಾವ ಆಚರಣೆಗಳು ಯಶಸ್ವಿಯಾಗುವುದಿಲ್ಲ. ಇದಕ್ಕೆ ಜನಾಂಗೀಯ ಸಹಾಭಾಗಿತ್ವ ಮುಖ್ಯ ಎಂದರು.
ಅರಸೀಕೆರೆಯಲ್ಲಿ ಕರವೇ ಸ್ವಾಭಿಮಾನಿ ಸೇನೆ ಅಸ್ತಿತ್ವಕ್ಕೆ
ಕರವೇ ಸ್ವಾಭಿಮಾನಿ ಸೇನೆಗೆ ಹಾಸನ ಜಿಲ್ಲಾ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರೀಶ್ ಗೌಡ ಅವರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ನಮಗೆ ಯಾವುದೇ ಜಾತಿ, ಧರ್ಮವಿಲ್ಲ, ನಮಗೆ ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು, ತಾಯಿ ಭುವನೇಶ್ವರಿ ಮಕ್ಕಳಾದ ನಾವು ಹೋರಾಟ ಮಾಡಲು ಸದಾ ಸಿದ್ಧ. ನೂತನ ಅರಸೀಕೆರೆ ಅಧ್ಯಕ್ಷರು ಶ್ರೀಧರ್ ಮರಂಡಿ ಅವರಿಗೆ ಅಭಿನಂದನೆ ತಿಳಿಸುತ್ತಾ, ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಹೋರಾಟ ಮಾಡಿ ಯಾವುದೇ ವಿರೋಧಗಳಿಗೂ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದರು.
ನವಗ್ರಹ ಗಣೇಶನಿಗೆ ಪತ್ರಕರ್ತರ ಸಂಘದಿಂದ ವಿಶೇಷ ಪೂಜೆ
ನವಗ್ರಹ ಗಣೇಶ ಮೂರ್ತಿಗೆ ೫೨ ದಿನಗಳ ಕಾಲ ನಡೆಯುವ ಪ್ರತಿದಿನದ ವಿಶೇಷ ಪೂಜೆಯ ನಿಮಿತ್ತ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ತನ್ನ ಸದಸ್ಯರು ಹಾಗೂ ಕುಟುಂಬ ವರ್ಗದೊಂದಿಗೆ ಸೇರಿ ವಿಶೇಷ ಪೂಜೆ ಸಲ್ಲಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯು ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಅಭಿನಂದಿಸಿದರು.
ವಾಲ್ಮೀಕಿ ಜೀವನಾದರ್ಶಗಳನ್ನು ನಾವು ಪಾಲಿಸಬೇಕಿದೆ
ಮಹರ್ಷಿ ವಾಲ್ಮೀಕಿ ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು. ವಾಲ್ಮೀಕಿಯವರ ಆದರ್ಶ ತತ್ವ ಸಿದ್ಧಾಂತಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಂಡಾಗ ಅವರ ಜೀವನ ಉತ್ತಮವಾಗಿರುತ್ತದೆ. ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಮಹಾಕಾವ್ಯ ವಿಶ್ವವಿಖ್ಯಾತ ಪಡೆದಿದ್ದು ವಿಶ್ವಕ್ಕೆ ಮಾದರಿ ಕಾವ್ಯವಾಗಿದೆ. ವಾಲ್ಮೀಕಿ ಮೊದಲು ಸಾಮಾನ್ಯ ವ್ಯಕ್ತಿಯಾಗಿದ್ದು ತದ ನಂತರ ದೇವರ ಅನುಗ್ರಹ ಹಾಗೂ ತಪಸ್ಸಿನ ಫಲವಾಗಿ ಪವಿತ್ರ ಗ್ರಂಥ ರಾಮಾಯಣ ಮಹಾಕಾವ್ಯ ರಚಿಸಿ ಜೀವನದ ಮೌಲ್ಯಗಳನ್ನು ಜಗತ್ತಿಗೆ ತಿಳಿಸುವ ಮೂಲಕ ಮಹರ್ಷಿ ವಾಲ್ಮೀಕಿಯಾದರು ಎಂದರು.
ಮಹರ್ಷಿ ವಾಲ್ಮೀಕಿಯವರ ಮಾರ್ಗದರ್ಶನ ಅನುಸರಿಸಿ
ಸಂಸ್ಕೃತದಲ್ಲಿ ರಾಮಾಯಣ ರಚಿಸಿರುವ ಮಹರ್ಷಿ ವಾಲ್ಮೀಕಿ ಅವರ ಮಾರ್ಗದರ್ಶನ ಅನುಸರಿಸಿ ನಡೆಯಬೇಕು ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಅವರು ತಿಳಿಸಿದರು. ಹಾಸನಾಂಬ ಕಲಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿಯವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ರಾಮಾಯಣ ಕುರಿತು ತಿಳಿಸುವುರ ಮೂಲಕ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ತಿಳಿಹೇಳಬೇಕು ಎಂದರು.
  • < previous
  • 1
  • ...
  • 175
  • 176
  • 177
  • 178
  • 179
  • 180
  • 181
  • 182
  • 183
  • ...
  • 418
  • next >
Top Stories
ಅಧ್ಯಕ್ಷರೇ, ನಾನು ಯಾರಿಗೆ ಜಾಗೃತಿ ಮೂಡಿಸಲಿ ! ಅಧ್ಯಕ್ಷ ಸ್ಥಾನ ಕಬಳಿಸಿ ಶಿಷ್ಯನಿಗೆ ತಿರುಮಂತ್ರ
ಹಸಿ ಅಡಿಕೆ ಗುತ್ತಿಗೆಗೆ ಹಿಂದೇಟು : ರೈತರಿಗೆ ಕಷ್ಟ
ಸರ್ಕಾರಿ ಆಸ್ಪತ್ರೆಗಳಲ್ಲೂ ಕೀಮೋಥೆರಪಿ : ದಿನೇಶ್
ಜೆಟ್ ಏರ್ ವೇಸ್ ಉದ್ಯೋಗಿ, ಬೆಳ್ತಂಗಡಿ ಮೂಲದ ಯುವತಿ ಪಂಜಾಬ್‌ನಲ್ಲಿ ಅನುಮಾನಾಸ್ಪದ ಸಾವು
3 ದಿನ ಮಳೆ : 14 ಜಿಲ್ಲೆಗೆ ಆರೆಂಜ್‌ ಅಲರ್ಟ್‌
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved