ವಿಷಯಾಧಾರಿತ ಹೋರಾಟಗಳಲ್ಲಿ ರೈತಸಂಘ ಯಶಸ್ಸು-ಮಲ್ಲಿಕಾರ್ಜುನ ಬಳ್ಳಾರಿಆಣೂರು ಮತ್ತು ಬುಡುಪನಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗಳನ್ನು ತುಂಬಿಸುವುದು ರೈತ ಸಂಘದ ವಿಷಯಾಧಾರಿತ ಹೋರಾಟಗಳಲ್ಲಿ ಒಂದಾಗಿದ್ದು, ಇದರಲ್ಲಿ ಯಶಸ್ಸು ಗಳಿಸಿದ ಬಳಿಕ ರೈತ ಸಂಘಟನೆ ಇನ್ನಷ್ಟು ಗಟ್ಟಿಗೊಂಡಿದೆ. ಸದರಿ ಹೋರಾಟಕ್ಕೆ ಹಿನ್ನೆಲೆಯಾಗಿ ಪ್ರೇರಣೆ ನೀಡಿದ ಸಿರಿಗೆರೆ ತರಳಬಾಳುಶ್ರೀಗಳು ಸೇರಿದಂತೆ ರೈತ ಮುಖಂಡ ಹಾಗೂ ಪಾಂಡವಪುರ ಶಾಸಕ ದರ್ಶನ ಪುಟ್ಟಣ್ಣಯ್ಯ ಅವರೊಂದಿಗೆ ಬಾಗಿನ ಅರ್ಪಿಸುವ ಕಾರ್ಯಕ್ಕೆ ನ.16ರಂದು ಚಾಲನೆ ನೀಡುವುದಾಗಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.