ಬ್ಯಾಡಗಿಯಲ್ಲಿ ಶಿಥಿಲಾವಸ್ಥೆಯ 19 ಕಟ್ಟಡಗಳ ತೆರವುಗೊಳಿಸಿ: ಡಾ. ಬಾಲಚಂದ್ರ ಪಾಟೀಲ ಸೂಚನೆಮುಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟನಿಂದ ಯಾವುದೇ ಕ್ಷಣದಲ್ಲಿ ಅಂತಿಮ ಆದೇಶ ಹೊರಬೀಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಪುರಸಭೆ ಮೇಲಿರುವ ಕಟ್ಟಡ ತೆರವುಗೊಳಿಸುವ ಜವಾಬ್ದಾರಿಯನ್ನು ಅಷ್ಟರೊಳಗೆ ಪೂರೈಸಬೇಕಾಗಿದ್ದು, ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪುರಸಭೆ ಅಧ್ಯಕ್ಷ ಡಾ. ಬಾಲಚಂದ್ರ ಪಾಟೀಲ ಖಡಕ್ ಸೂಚನೆ ನೀಡಿದರು.