ವಿದೇಶಿಗರು ಬೆಂಗಳೂರಿನತ್ತ ತಿರುಗಿ ನೋಡುವಂತೆ ಮಾಡಿದ ಕೆಂಪೇಗೌಡರು: ಡಾ.ಎನ್.ಜಿ.ಪ್ರಕಾಶ್ನಾಡಪ್ರಭು ಕೆಂಪೇಗೌಡರು ಒಬ್ಬ ರಾಜನಷ್ಟೆ ಅಲ್ಲ. ಅವರೊಬ್ಬ ರೈತ ಕೈಗಾರಿಕೋದ್ಯಮಿ, ಎಂಜಿನಿಯರ್, ಜ್ಞಾನಿ ದಾರ್ಶನಿಕ ಸಾರ್ವಭೌಮ ಹೀಗೆ ಊಹೆಗೂ ನಿಲುಕದ ವ್ಯಕ್ತಿತ್ವ ಉಳ್ಳವರು. ಆಂಧ್ರ ಮತ್ತು ತಮಿಳುನಾಡಿನವರು ಕೆಂಪೇಗೌಡರನ್ನು ನಮ್ಮವರು ಎನ್ನುತ್ತಾರೆ. ನಾವು ಕೆಂಪೇಗೌಡರಂತೆ ಪಟ್ಟಣ ಕಟ್ಟಲಾಗುವುದಿಲ್ಲ. ಆದರೆ, ಅಂತವರ ಬದುಕಿನ ಆದರ್ಶ ನಮ್ಮ ಬದುಕನ್ನು ಉತ್ತಮವಾಗಿ ನಿರ್ಮಿಸಬಲ್ಲದು.