ಶ್ರೀರಾಮನ ಆದರ್ಶ, ಗುಣಗಳನ್ನು ಅಳವಡಿಸಿಕೊಳ್ಳಿ: ನಿರ್ಮಲಾನಂದನಾಥ ಸ್ವಾಮೀಜಿನಾವು ಚಿಕ್ಕವರಾಗಿದ್ದಾಗ ಮಕ್ಕಳು ಗುರು-ಹಿರಿಯರಿಗೆ ತಲೆ ಬಗ್ಗಿಸಿ ಶ್ರೀರಾಮಚಂದ್ರನ ಪಿತೃ ವಾಕ್ಯ ಪರಿಪಾಲನೆಯಂತೆ ಗೌರವ ನೀಡುತ್ತಿದ್ದೇವು. ಆದರೆ, ಈಗ ಕಾಲ ಬದಲಾಗಿದೆ. ಯುವಕರು ಬರುತ್ತಿದ್ದರೆ ಗುರು-ಹಿರಿಯರು ತಲೆಬಗ್ಗಿಸಿ ಪಕ್ಕಕ್ಕೆ ಸರಿಯುವ ಕಾಲ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಶ್ರೀರಾಮಚಂದ್ರನ ಆದರ್ಶ, ತತ್ವಗಳು ಕ್ರಿಯಾಶೀಲವಾಗುವ ಸ್ಥಿತಿ ನಿರ್ಮಾಣವಾಗಬೇಕು.