ವಿದ್ಯಾರ್ಥಿಗಳಿಗೆ ಗುರು ದಾರಿ ದೀಪವಾದರೇ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಆರ್.ಎ.ಚೇತನ್ ರಾವ್ಸಮಾಜದಲ್ಲಿ ಕೇವಲ 15ರಷ್ಟು ಮಂದಿ ಪ್ರತಿಭಾವಂತರು ಮಾತ್ರ ವಿವಿಧ ಕ್ಷೇತ್ರಗಳಲ್ಲಿ ತೊಡಗಿ ಜಗತ್ತನ್ನು ಬದಲಾವಣೆ ಮಾಡಲು ತೋಡಗಿದ್ದು, ಎಂಜಿನಿಯರ್, ಡಾಕ್ಟರ್, ಜಡ್ಜ್ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿ ಹಲವು ಕಂಪನಿಗಳನ್ನು ಸ್ಥಾಪಿಸಿ ಸಾಧನೆ ಮಾಡಿದ್ದಾರೆ. ಉಳಿದ ಶೇ.25 ರಷ್ಟು ಮಂದಿ 60 ರಿಂದ 80 ರಷ್ಟು ಅಂಕ ಪಡೆದರೂ ಮೇಲಕ್ಕೂ ಏರದೆ, ಕೆಳಗೂ ಇಳಿಯದೆ ಸಾಗುತ್ತಿದ್ದಾರೆ.