ನಿಡಸೋಸಿ ಶ್ರೀಗಳ ಕಿತ್ತಾಟ: 21ಕ್ಕೆ ಅಂತಿಮ ತೀರ್ಮಾನಉತ್ತರ ಕರ್ನಾಟಕದ ಪುರಾತನ ಇತಿಹಾಸ ಹೊಂದಿರುವ ಹಾಗೂ ದಾಸೋಹ ಪರಂಪರೆಯ ಜೊತೆಗೆ ಶಿಕ್ಷಣಕ್ಕೆ ಒತ್ತು ಕೊಟ್ಟು ಗಡಿಭಾಗದ ಭಕ್ತಿಯ ಶ್ರದ್ಧಾಕೇಂದ್ರವಾಗಿರುವ ಹುಕ್ಕೇರಿ ತಾಲೂಕಿನ ನಿಡಸೋಸಿಯ ಶ್ರೀ ದುರದುಂಡಿಶ್ವರ ಮಠದಲ್ಲಿ ಹಿರಿಯ ಮತ್ತು ಕಿರಿಯ ಶ್ರೀಗಳ ಪೀಠದ ಗುದ್ದಾಟಕ್ಕೆ ಸಮುದಾಯದ ಮುಖಂಡರು ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದಾರೆ. ಮಾತ್ರವಲ್ಲ, ಪಟ್ಟಕ್ಕಾಗಿ ಪಟ್ಟು ಹಿಡಿದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಕಿರಿಯ ಶ್ರೀಗಳಾದ ನಿಜಲಿಂಗೇಶ್ವರ ಶ್ರೀಗಳು ಸತ್ಯಾಗ್ರಹ ಕೈಬಿಟ್ಟಿದ್ದಾರೆ.