• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕುರುಬ ಸಮಾಜದ ನಿಂದನೆ ಮಾಡಿದವರ ವಿರುದ್ಧ ದೂರು
ಕುರುಬ ಸಮುದಾಯದ ವಿರುದ್ಧ ಕೀಳುಮಟ್ಟದ ಭಾಷೆಯನ್ನು ಬಳಸಿ ಜಾತಿ ನಿಂದನೆ ಮಾಡಿರುವ ಇಬ್ಬರನ್ನು ಕೂಡಲೇ ಬಂಧಿಸುವಂತೆ ವಕೀಲರಾದ ಮಧುಸೂದನ್ ಹಾಗೂ ಕೆಡಿಪಿ ಸದಸ್ಯ ಮಹೇಶ್‌ ಕಬ್ಬಾಳು ಒತ್ತಾಯಿಸಿದ್ದಾರೆ. ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಿಂದ ಸಿದ್ದರಾಮಯ್ಯನವರ ಅಭಿಮಾನಿಗಳಿಗೆ ಹಾಗೂ ಕುರುಬ ಸಮುದಾಯಕ್ಕೆ ಧಕ್ಕೆ ಉಂಟಾಗಿರುತ್ತದೆ. ಇಂತಹ ವಿಕೃತ ಮನಸ್ಸುಳ್ಳ ವ್ಯಕ್ತಿಗಳಿಂದ ಜಾತಿ ಜಾತಿಗಳ ನಡುವೆ ದ್ವೇಷವನ್ನುಂಟುಮಾಡಿ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಲು ಪ್ರಯತ್ನಿಸುತ್ತಿರುತ್ತಾರೆ. ಆದ್ದರಿಂದ ಈ ಇಬ್ಬರ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಜರುಗಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸಿದರೆ ಶಿಸ್ತುಕ್ರಮ
ಸಾಮಾಜಿಕ ಜಾಲತಾಣಗಳಲ್ಲಿ ಕೋಮುಗಲಭೆಗೆ ಸಂಬಂಧಪಟ್ಟ ಸುಳ್ಳುಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಪಿಐ ರೇವಣ್ಣ ಎಚ್ಚರಿಕೆ ನೀಡಿದರು. ಮೆರವಣಿಗೆ ಸಂದರ್ಭದಲ್ಲಿ ಸಾರ್ವಜನಿಕರರಿಗೆ ತೊಂದರೆಯಾಗದಂತೆ ಸ್ವಯಂ ಸೇವಕರನ್ನು ನೇಮಿಸವೇಕು. ಗಣೇಶ ಪ್ರತಿಷ್ಠಾಪನೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಕಡ್ಡಾಯ ಅನುಮತಿ ಬೇಕು. ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕತ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಇದಕ್ಕೆ ನೇರವಾಗಿ ಆಯೋಜಕರನ್ನೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಮಸೀದಿಗಳಲ್ಲಿ ಎಲ್ಲಾ ಯುವಕರಿಗೂ ಸೂಕ್ತ ಮಾಹಿತಿ ನೀಡುವ ಮೂಲಕ ಅತಿರೇಕದ ವರ್ತನೆಗೆ ಅವಕಾಶ ನೀಡುವುದಿಲ್ಲ ಅಂತಹ ವರ್ತನೆ ಕಂಡುಬಂದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ವಾಹನ ವಶಪಡಿಸಿಕೊಳ್ಳಲಾಗುವುದು ಎಂದರು.
ಎಟಿಎಂನಲ್ಲಿ ವೃದ್ಧೆಗೆ ಏಮಾರಿಸಿದ್ದವನ ಬಂಧನ
ಗೋಣಿಬೀಡು ಹೋಬಳಿಯ ಉದಸೆ ಗ್ರಾಮದ ಪವಿತ್ರ ಎಂಬುವವರು ತಮ್ಮ ಮೊಮ್ಮಗನೊಂದಿಗೆ ಸರ್ಕಾರಿ ಆಸ್ಪತ್ರೆಗೆ ಬಂದು ನಂತರ ಔಷಧಿಗಾಗಿ ಹತ್ತಿರದಲ್ಲಿದ್ದ ಎಸ್‌ಬಿಐ ಎಟಿಎಂನಲ್ಲಿ ಹಣ ಬಿಡಿಸಲು ಬಂದಿದ್ದರು. ಈ ಸಂದರ್ಭದಲ್ಲಿ ಎಟಿಎಂ ಹಣ ಬಾರದ ಹಿನ್ನಲೆ ಶಿರಾ ಗ್ರಾಮದ ಅರುಣ್ ಎನ್ನುವ ವ್ಯಕ್ತಿ ತನ್ನ ಕೈಚಳಕ ತೋರಿ ಹಣ ಬಿಡಿಸಿ ಕೊಳ್ಳುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಿಸಿ ಅವರ ಬಳಿ ಇದ್ದ ಎಟಿಎಂ ಬದಲಿಸಿ ಪಿನ್ ಕೋಡ್ ತಿಳಿದುಕೊಂಡಿದ್ದಾನೆ. ಹಾಸನದ ಕರ್ನಾಟಕದ ಬ್ಯಾಂಕ್ ಎಟಿಎಂನಲ್ಲಿ ಸುಮಾರು ೧೮ ಸಾವಿರ ರು. ಗಳನ್ನು ಬಿಡಿಸಿಕೊಂಡಿದ್ದಾನೆ. ನಂತರ ಪವಿತ್ರ ಮೊಬೈಲಿಗೆ ಹಣ ಡ್ರಾ ಆಗಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.
ಕಾರ್ಲೆ ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಸೀಮಂತ ಕಾರ್ಯಕ್ರಮ
ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ತಲೂಕಿನ ಕಾರ್ಲೆ ಪ್ರಥಮ ಕೇಂದ್ರ ನೇಸರ ಸಭಾಂಗಣದಲ್ಲಿ ರೋಟರಿ ಕ್ಲಬ್ ಹಾಸನ್ ಮಿಟ್ಟೋನ್ ಹಾಗೂ ಕಾರ್ಲೆ ಅಂಗನವಾಡಿ ಸರ್ಕಲ್ ಇವರ ವತಿಯಿಂದ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಡಾ. ತೇಜಸ್ವಿ ಆಡಳಿತ ವೈದ್ಯಾಧಿಕಾರಿ ಇವರು ಸ್ತನ್ಯಪಾನ ಸಪ್ತಾಹದ ಮಾಹಿತಿ ನೀಡಿ, ತಾಯಂದಿರಿಗೆ ಎದೆ ಹಾಲು ನೀಡುವ ಸಂದರ್ಭದಲ್ಲಿ ಕಂಡುಬರುವ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ, ಚಿಕ್ಕ ಮಕ್ಕಳ ಆರೈಕೆ, ಗರ್ಭಿಣಿಯರ ಆರೈಕೆ ಎದೆ ಹಾಲು ಮಹತ್ವ ಹಾಗೂ ತಾಯಂದಿರಿಗೆ ಆಗುವ ಪ್ರಯೋಜಗಳನ್ನು ತಿಳಿಸಿಕೊಟ್ಟರು.
ಹಿಂದೂ ಧರ್ಮದ ಮೇಲಿನ ಅಪಪ್ರಚಾರ ಬೇಸರ ತಂದಿದೆ
ನಮ್ಮ ಧರ್ಮ, ಸಂಸ್ಕೃತಿಯ ರಕ್ಷಣೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಿಂದೂ ಧರ್ಮ ಹಾಗೂ ಧರ್ಮಕ್ಕೆ ಸಂಬಂಧಿಸಿದ ಪವಿತ್ರವಾದ ಸ್ಥಳಗಳು, ವ್ಯಕ್ತಿಗಳ ಮೇಲೆ ನಿರಂತರವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಅದರಲ್ಲೂ ಪವಿತ್ರವಾದ ಧರ್ಮಸ್ಥಳ ಕ್ಷೇತ್ರ ಹಾಗೂ ಅಲ್ಲಿನ ಧರ್ಮಾಧಿಕಾರಿಗಳ ಮೇಲೆ ಹೆಚ್ಚಿನ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಾವೆಲ್ಲಾ ಒಗ್ಗೂಡಿ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಭಾರತೀಯ ನಾರಿಗೆ ಪುರುಷರಿಗಿಂತ ಹೆಚ್ಚು ಜವಾಬ್ದಾರಿ ಇದೆ
ಬಾಲ್ಯದಿಂದ ಹಿಡಿದು ಪ್ರಾಯಕ್ಕೆ ಬಂದ ನಂತರ ಗೃಹಿಣಿಯಾಗಿ, ಮಕ್ಕಳ ತಾಯಿಯಾಗಿ ವಿವಿಧ ಕಾಲಘಟ್ಟಗಳಲ್ಲಿ ಭಾರತೀಯ ಮಹಿಳೆ ವಿವಾಹದ ನಂತರ ಪುರುಷರಿಗಿಂತ ಹೆಚ್ಚು ಜವಬ್ದಾರಿ ಹೊತ್ತಿರುತ್ತಾಳೆ ಎಂದು ಪ್ರಸೂತಿ ತಜ್ಞೆ ಡಾ. ರಂಗಲಕ್ಷ್ಮಿ ಅಭಿಪ್ರಾಯಪಟ್ಟರು. ನಿಗದಿತ ಅವಧಿಯಲ್ಲಿ ಪ್ರತಿಯೊಬ್ಬ ಸ್ತ್ರೀ ಸ್ತನ ಕ್ಯಾನ್ಸರ್‌, ಗರ್ಭ ಕೊರಳಿನ ಕ್ಯಾನ್ಸರ್‌ಗೆ ಸಂಬಂಧಿಸಿದ ಸೂಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರ ಮೂಲಕ ಮುಂದೆ ಬರುವ ಗಂಭೀರ ಸಮಸ್ಯೆಗಳಿಂದ ಪಾರಾಗಬಹುದು. ಪ್ಯಾಪ್ ಸ್ಮಿಯರ್‌, ಮೆಮೊಗ್ರಫಿಯಂತಹ ತಪಾಸಣೆಗೆ ನಾಚಿಕೆಯನ್ನು ಸರಿಸಿ ತಮ್ಮನ್ನು ತಾವು ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು ಎಂದು ಹೇಳಿದರು.
ಹಾಸನಾಂಬ ಆಸ್ಪತ್ರೆಯಲ್ಲಿ ಎದಿಗೂಡಿನ ಯಶಸ್ವಿ ಶಸ್ತ್ರಚಿಕಿತ್ಸೆ
ಶ್ರೀ ಹಾಸನಾಂಬ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಹಾಸನದಲ್ಲಿ ಮೊದಲ ಬಾರಿಗೆ ಎದೆಗೂಡಿನ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಆಸ್ಪತ್ರೆ ಮುಖ್ಯಸ್ಥ ಹಾಗೂ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಬಸವರಾಜು ತಿಳಿಸಿದರು. ರೋಗಿಯ ಕಡೆಯವರು ಶಸ್ತ್ರಚಿಕಿತ್ಸೆಗೆ ಸಮ್ಮತಿಸಿದ್ದ 23/07/2025ರಂದು ಎದೆಗೂಡಿನ ಶಸ್ತ್ರಚಿಕಿತ್ಸೆ ಮಾಡುವಾಗ ಬಲಭಾಗದ ಶ್ವಾಸಕೋಶದಲ್ಲಿ ಎರಡು ದೊಡ್ಡ ಗಾತ್ರದ ಗೆಡ್ಡೆಗಳು ಕಂಡುಬಂದಿರುತ್ತವೆ.ಅವುಗಳನ್ನು ಬಲಭಾಗದ ಶ್ವಾಸಕೋಶದಿಂದ ಬೇರ್ಪಡಿಸಿ ಮತ್ತು ಶ್ವಾಸಕೋಶದ ಸ್ವಲ್ಪ ಭಾಗವನ್ನು ಕೂಡ ಯಶಸ್ವಿಯಾಗಿ ತೆಗೆದಿರುತ್ತಾರೆ. ನಂತರ ಉಳಿದ ಶ್ವಾಸಕೋಶಕ್ಕಾಗಲೀ ಹೃದಯ ಹಾಗೂ ಇತರ ಅಂಗಗಳಿಗೆ ಯಾವುದೇ ಹಾನಿ ಆಗದಂತೆ ಯಶಸ್ವಿ ಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.
ವಿಷ್ಣು ಸಮಾಧಿ ದ್ವಂಸ ಖಂಡಿಸಿ ಪ್ರತಿಭಟನೆ
ನಟ ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ನೆಲಸಮ ಮಾಡಿರುವ ಘಟನೆ ಖಂಡಿಸಿ ನಗರದಲ್ಲಿ ಡಾ. ವಿಷ್ಣು ಸೇನಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಏಕಾಏಕಿ ಸ್ಮಾರಕವನ್ನು ಒಡೆದು ಹಾಕಿರುವುದು ಕನ್ನಡ ಚಿತ್ರರಂಗ ಹಾಗೂ ಹಿರಿಯ ಕಲಾವಿದರಿಗೆ ಮಾಡಿದ ಅಪಮಾನವಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಸ್ಮಾರಕವನ್ನು ಅದೇ ಸ್ಥಳದಲ್ಲಿ ಪುನರ್‌ ಸ್ಥಾಪಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಚಿಕ್ಕಾಟೀಲಿ ಮೂರು ಮಕ್ಕಳಿಗೆ ಕಚ್ಚಿದ ಬೀದಿ ನಾಯಿ
ಬೀದಿ ನಾಯಿ ಕಚ್ಚಿ ಮೂವರು ಮಕ್ಕಳು ಗಾಯಗೊಂಡ ಘಟನೆ ತಾಲೂಕಿನ ಚಿಕ್ಕಾಟಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಚಿಕ್ಕಾಟಿ ಗ್ರಾಮದ ಸುಜನ್‌ (10), ಸಮೃದ್ಧಿ(7), ಮದನ್ (‌6)ಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ. ಸಮೃದ್ಧಿಗೆ ತುಸು ಗಾಯಗೊಂಡಿದೆ ಎನ್ನಲಾಗಿದೆ.
ವೃತ್ತಿ ಉಳಿಸಿಕೊಳ್ಳಲು ಪತ್ರ ಬರಹಗಾರರು ಸಂಘಟಿತರಾಗಿ
ಸರ್ಕಾರ ಪತ್ರ ಬರಹಗಾರ ವೃತ್ತಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದನ್ನು ಉಳಿಸಿಕೊಳ್ಳಲು ಪತ್ರ ಬರಹಗಾರರು ಸಂಘಟಿತರಾಗಬೇಕು ಎಂದು ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪರವಾನಗಿ ಪಡೆದ ಪತ್ರ ಬರಹಗಾರರ ಒಕ್ಕೂಟ ರಾಜ್ಯಾಧ್ಯಕ್ಷ ಡಿ.ಕೆ.ಸಂಗಮೇಶ ಎಲಿಗಾರ್ ಸಲಹೆ ನೀಡಿದರು.
  • < previous
  • 1
  • ...
  • 522
  • 523
  • 524
  • 525
  • 526
  • 527
  • 528
  • 529
  • 530
  • ...
  • 13423
  • next >
Top Stories
ದೇಶ ಕಂಡ ಅಸಾಧಾರಣ ಧ್ವನಿ ಡಾ| ಹಜಾರಿಕಾ
ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಧರ್ಮಸ್ಥಳ ಕೇಸಲ್ಲಿ 40 ಯೂಟ್ಯೂಬರ್‌ಗಳ ಬೆನ್ನು ಬಿದ್ದ ಎಸ್‌ಐಟಿ
ಬುರುಡೆ ಷಡ್ಯಂತ್ರಕ್ಕೆ ಉಜಿರೆ ಹೋಟೆಲ್‌ನಲ್ಲಿ ಪ್ಲ್ಯಾನ್‌?
ಅನ್ನಭಾಗ್ಯದ ಅಕ್ಕಿ ಫಾರಿನ್‌ಗೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved