ಧರಣಿಯಿಂದ ಚನ್ನರಾಯಪಟ್ಟಣದ ಸಾರ್ವಜನಿಕರಿಗೆ ಕಿರಿಕಿರಿಚನ್ನರಾಯಪಟ್ಟಣ ತಾಲೂಕು ಆಡಳಿತದ ವಿರುದ್ಧ ಕಳೆದ ೯ ದಿನಗಳಿಂದ ನಡೆಸುತ್ತಿರುವ ಕೆಲ ಪ್ರಗತಿಪರ ಸಂಘಟನೆಗಳು ಧರಣಿ ಸಮಸ್ಯೆಯ ಕುರಿತಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರವೂ ಧರಣಿ ಮುಂದುವರಿಕೆ ಸರಿಯಲ್ಲ, ಇದರಿಂದ ಸಾರ್ವಜನಿಕರಿಗೆ ಮತ್ತು ಸರ್ಕಾರಿ ನೌಕರರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂದು ದಲಿತ ಸಂಘಟನೆ ಮುಖಂಡ, ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದ್ದಾರೆ. ತಾಲೂಕು ಕಚೇರಿ ಸುತ್ತಮುತ್ತ ಇರುವ ಏಳೆಂಟು ಸರ್ಕಾರಿ ಇಲಾಖೆಗಳ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದಿದ್ದಾರೆ.