ಕ್ಷೇತ್ರದ ಅಭಿವೃದ್ಧಿಗೆ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುವೆ: ಶಾಸಕ ಶ್ರೀನಿವಾಸ ಮಾನೆಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು 7ನೇ ವೇತನ ಆಯೋಗದ ಒಂದು ತಿಂಗಳ ಹೆಚ್ಚುವರಿ ಹಣವನ್ನು ನೀಡಲು ನೀಡಿದ್ದ ಕರೆಗೆ ತಾಲೂಕಿನಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಬಿಇಒ ಮತ್ತು ಇಒ ಖಾತೆಯಲ್ಲಿ ₹32 ಲಕ್ಷ ಸಂಗ್ರಹವಾಗಿದೆ. ಶಿಕ್ಷಣ ಇಲಾಖೆಯವರೂ ಕೈಜೋಡಿಸಿದರೆ ಒಂದು ಕೋಟಿ ರು. ಸಂಗ್ರಹವಾಗುವ ನಿರೀಕ್ಷೆಯಿದೆ.