ರಾಮಲಲ್ಲಾ ಪ್ರತಿಷ್ಠಾಪನೆ: ಕುಪ್ಪೆ ಸೀತಾರಾಮಲಕ್ಷ್ಮಣ ಕ್ಷೇತ್ರಕ್ಕೆ ಪಾದಯಾತ್ರೆರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ನಾಮದೇವ ಸಿಂಪಿ ಸಮಾಜ, ಬಜರಂಗದಳ, ವಿ.ಎಚ್.ಪಿ. ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು ಕುಪ್ಪೆ ಗ್ರಾಮದ ಶ್ರೀ ಸೀತಾರಾಮಲಕ್ಷ್ಮಣ ಸನ್ನಿಧಿಗೆ ಪಾದಯಾತ್ರೆ ಕೈಗೊಂಡರು. ಸೊರಬದ ಪಟ್ಟಣದ ನಾಮದೇವ ಗಲ್ಲಿಯಲ್ಲಿರುವ ಶ್ರೀ ವಿಠ್ಠಲ ರುಖುಮಾಯಿ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಿ ಪಟ್ಟಣದ ಮುಖ್ಯರಸ್ತೆ ಮೂಲಕ ಸೊರಬದಿಂದ ಸಾಗರಕ್ಕೆ ತೆರಳುವ ಮಾರ್ಗ ಮಧ್ಯದ ಸುಮಾರು 8 ಕಿ.ಮೀ. ದೂರದ ಸೊರಬ ತಾಲೂಕಿನ ಕುಪ್ಪೆ ಗ್ರಾಮಲ್ಲಿರುವ ಶ್ರೀ ಸೀತಾರಾಮಲಕ್ಷ್ಮಣ ದೇವಸ್ಥಾನಕ್ಕೆ ಸುಮಾರು 500ಕ್ಕೂ ಅಧಿಕ ಶ್ರೀರಾಮಭಕ್ತರು ಪಾದಯಾತ್ರೆ ಮೂಲಕ ತೆರಳಿದರು.