ವಕ್ಫ್ ಆಸ್ತಿ ಎಂಬ ಪಹಣಿ ರದ್ದುಪಡಿಸಿಜಿಲ್ಲೆಯ ರೈತರ ಪಹಣಿಗಳಲ್ಲಿ ನಮೂದಾಗಿರುವ ವಕ್ಫ್ ಆಸ್ತಿ ಎಂಬ ಪಹಣಿಗಳನ್ನು ರದ್ದು ಪಡಿಸಬೇಕು. ದೇವಾಲಯದ ಜಮೀನುಗಳನ್ನು ವಕ್ಫ್ ಬೋರ್ಡ್ ನಿಂದ ಮುಕ್ತಗೊಳಿಸಬೇಕು, ಗೋಮಾಳಗಳು, ಸರಕಾರಿ ಆಸ್ತಿಗಳು, ಶಾಲಾ, ಕಾಲೇಜುಗಳಿಗೆ ಸಂಬಂಧಪಟ್ಟ ಆಸ್ತಿಗಳು ವಕ್ಫ್ ಬೋರ್ಡ್ ನಿಂದ ಮುಕ್ತವಾಗಬೇಕು ಎಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ವತಿಯಿಂದ ಬೃಹತ್ ಪ್ರತಿಭಟನಾ ಧರಣಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಸಲಾಯಿತು.