ಮಾವತ್ತೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನ ದುರುಪಯೋಗದಲಿತರಿಗೆ, ನಿರ್ಗತಿಕರಿಗೆ, ಮದುವೆ, ಶುಭ ಸಮಾರಂಭ ಹಾಗೂ ಸರ್ಕಾರಿ ಕಾರ್ಯಕ್ರಮಕ್ಕೆ ಬಳಕೆ ಆಗಬೇಕಿದ್ದ ಕೊರಟಗೆರೆ ತಾಲೂಕಿನ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಗ್ರಾಪಂ ಅಧಿಕಾರಿಗಳು ನಕಲಿ ವೈದ್ಯನಿಗೆ ತಿಂಗಳಿಗೆ 500 ರು.ಯಂತೆ ಬಾಡಿಗೆ ನೀಡಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.