ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ವಾಲ್ಮೀಕಿ: ಡಾ. ಅಮರೇಶ್ ಯತಗಲ್ರಾಮಾಯಣ, ಮಹಾಭಾರತ ಈ ದೇಶದ ಮಹಾ ಕಾವ್ಯಗಳು. ಅವುಗಳಲ್ಲಿ ರಾಮಾಯಣ ಮೊದಲ ಶ್ರೇಷ್ಠ ಗ್ರಂಥವಾಗಿದ್ದು, ರಾಮಾಯಣವನ್ನು ರಚಿಸಿದ ವಾಲ್ಮೀಕಿ ಸರ್ವರ ಒಳಿತನ್ನೇ ಬಯಸಿದವರು ಎಂದು ಕನ್ನಡ ವಿಶ್ವವಿದ್ಯಾಲಯ ಅಧ್ಯಯನಾಂಗ ವಿಭಾಗದ ನಿರ್ದೇಶಕ ಡಾ. ಅಮರೇಶ್ ಯತಗಲ್ ಹೇಳಿದರು.