ಗುಮ್ಮಟನಗರಿಗೆ ಮಾರ್ಚ್ನಲ್ಲೇ ಬಿಸಿಲಾಘಾತಕನ್ನಡಪ್ರಭ ವಾರ್ತೆ ವಿಜಯಪುರಮಾರ್ಚ್ ತಿಂಗಳು ಆರಂಭವಾಗಿದ್ದೆ ತಡ ಬಿಸಿಲ ಝಳ ಶುರುವಾಗಿದೆ. ರಾಜ್ಯದ ಜನರು ಬಿಸಿಯ ತಾಪಕ್ಕೆ ಹೈರಾಣಾಗಿ ವಿಲವಿಲ ಎನ್ನುತ್ತಿದ್ದಾರೆ. ಅದರಲ್ಲೂ ಈ ಬಾರಿ ಗುಮ್ಮಟ ನಗರಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ತಾಪಮಾನ ದಾಖಲಾಗಿದ್ದು, ಜನರು ಆತಂಕಕ್ಕೊಳಗಾಗುವಂತೆ ಮಾಡಿದೆ. ಗೋಳಗುಮ್ಮಟ, ವಚನಗುಮ್ಮಟ, ಆಧ್ಯಾತ್ಮಿಕ ನೆಲೆಗಟ್ಟಿನಿಂದ ತನ್ನತ್ತ ಸೆಳೆಯುತ್ತಿದ್ದ ವಿಜಯಪುರ ಇದೀಗ ತಾಪಮಾನಕ್ಕೂ ಹೆಸರಾಗುವಂವತಾಗಿದೆ.