ಬಸವಾಪಟ್ಟಣದ ಗತವೈಭವ ಮರುಕಳಿಸಲು ಪ್ರಯತ್ನಿಸುವೆ ಶಾಸಕ ಮಂಜು

Aug 03 2025, 11:45 PM IST
ಸಂಸ್ಕಾರವಿದ್ದಾಗ ಮಾತ್ರ ವಿದ್ಯೆಗೆ ಬೆಲೆ ಮತ್ತು ಎಲ್ಲರೂ ಗುರುಹಿರಿಯರಲ್ಲಿ ಗೌರವ ಭಾವನೆ ಹೊಂದಿರುವಂತಹ ಬಸವಾಪಟ್ಟಣ ಗ್ರಾಮವು ಬಹಳ ಹಿಂದಿನಿಂದಲೂ ವಿದ್ಯಾಕೇಂದ್ರವಾಗಿದೆ. ವಾಣಿಜ್ಯ ಬೇಸಾಯದಲ್ಲಿ ಬಹಳ ಪ್ರಗತಿಯನ್ನು ಸಾಧಿಸಿತ್ತು. ಹಿಂದಿನ ವೈಭವದ ಬಸವಾಪಟ್ಟಣ ಸ್ಥಾಪನೆಗೆ ಶ್ರಮಿಸುವುದಾಗಿ ಅರಕಲಗೂಡು ಶಾಸಕ ಎ.ಮಂಜು ತಿಳಿಸಿದರು. ಬಸವಾಪಟ್ಟಣ ಗ್ರಾಮದ ಶ್ರೀ ತೋಂಟದಾರ್ಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜರುಗಿದ ಮುನೇಶ್ವರ ಸ್ವಾಮಿ ಪೂಜಾ ಕೈಂಕರ್ಯ ರುದ್ರಾಭಿಷೇಕ ಮತ್ತು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ೨೪-೨೫ನೇ ಸಾಲಿನಲ್ಲಿ ಶೇ. ೮೦ ಹೆಚ್ಚು ಅಂಕ ಪಡೆದ ವೀರಶೈವ ಲಿಂಗಾಯಿತ ಸಮಾಜದ ಪ್ರತಿಭಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೇರವೇರಿಸಿ ಮಾತನಾಡಿದರು.