ಕಾವೇರಿ ಉತ್ಸವ, ಮಂಡ್ಯ ಸಂಭ್ರಮಕ್ಕೆ ಹರಿದುಬಂದ ಜನಸಾಗರ
Nov 10 2024, 01:34 AM ISTನಾಲ್ವಡಿ ಅವರ ಸಾಧನೆಗಳಲ್ಲಿ ಶೇ.೫ರಷ್ಟು ಸಾಧನೆಗಳನ್ನು ಮಾಡುವುದಕ್ಕೆ ಸರ್ಕಾರಗಳಿಂದ ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ. ರಾಜಕಾರಣ ಹೊಲಸೆದ್ದು ಹಾಳಾಗಿಹೋಗಿದೆ. ಜನರು ರಾಜಕಾರಣಿಗಳ ಬಗ್ಗೆ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಏಷ್ಯಾಕ್ಕೆ ಮೊದಲ ಬಾರಿಗೆ ವಿದ್ಯುತ್ ನೀಡಿದ ಹೆಗ್ಗಳಿಕೆ ನಮ್ಮ ನಾಲ್ವಡಿಯವರದ್ದು. ಆದರೆ, ಇಂದಿಗೂ ವಿದ್ಯುತ್ ಬೆಳಕನ್ನೇ ಕಾಣದ ಅದೆಷ್ಟೋ ಗ್ರಾಮಗಳು ಕತ್ತಲಲ್ಲಿ ಮುಳುಗಿರುವುದನ್ನು ನೋಡುತ್ತಿದ್ದೇವೆ. ಇದು ಸರ್ಕಾರಗಳಿಗೆ ಜನರ ಬಗ್ಗೆ ಎಂತಹ ಬದ್ಧತೆ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.