ನಡುರಾತ್ರಿ ಭೇಟಿ ನೀಡಿ ಸಾಂತ್ವನ ಹೇಳಿದ ಶಾಸಕ ಸುರೇಶ್‌

Mar 16 2025, 01:46 AM IST
ಕಾಡಾನೆಯಿಂದ ಮೃತಪಟ್ಟ ಕೋಗೋಡು ಗ್ರಾಮದ ಮಹಿಳೆ ಸುಶೀಲಮ್ಮ ಕುಟುಂಬಕ್ಕೆ ಶಾಸಕ ಎಚ್. ಕೆ. ಸುರೇಶ್ ನಡುರಾತ್ರಿ ಸ್ಥಳಕ್ಕೆ ಆಗಮಿಸಿ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಿಸಿದರು. ಇನ್ನು ಮುಂದೆ ಕ್ಷೇತ್ರದಲ್ಲಿ ಒಂದೇ ಒಂದು ಆನೆಯ ದಾಳಿಗೆ ಸಾವನ್ನಪ್ಪಿದ್ದರೆ ಅರಣ್ಯ ಇಲಾಖೆ ಅಧಿಕಾರಿಗಳೆ ಹೊಣೆಯಾಗುತ್ತಾರೆ. ಅಂದು ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಾರೂ ಸಹ ಭಯಪಡದೆ ನಗುಮುಖದಿಂದ ಇರಿ ಎಂದು ಸೂತಕದ ಮನೆಯಲ್ಲಿ ಸಂಸದರು ಹೇಳುವುದು ಎಷ್ಟು ಸರಿ. ನಾಲ್ಕು ಪುಂಡಾನೆಗಳನ್ನು ಹಿಡಿದರೆ ಸಾಲದು ಇಲ್ಲಿರುವ ೭ಕ್ಕೂ ಹೆಚ್ಚು ಪುಂಡಾನೆಗಳನ್ನು ಹಿಡಿಯಬೇಕು ಉಳಿದ ಕಾಡಾನೆಗಳನ್ನು ಭದ್ರಾ ಅರಣ್ಯಕ್ಕೆ ಕಳಿಸುವ ಕೆಲಸ ಮಾಡಬೇಕು ಎಂದರು.