ಶಾಸಕ ಸುರೇಶ್ ಜತೆ ಜಟಾಪಟಿ ಮಾಡಿದ್ದ ಬಿಇಒ ಅಮಾನತು

Sep 20 2025, 01:00 AM IST
ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಶಿಕ್ಷಕರ ಸಂಘದ ನಿರ್ದೇಶಕರನ್ನು ಅವಮಾನಿಸಿ ರಾತ್ರಿಯ ಸಮಯದಲ್ಲಿ ಕುಡಿದು ಫೋನ್ ಮಾಡಿ ಅವಾಚ್ಯ ಶಬ್ದದಿಂದ ನಿಂದನೆ ಮಾಡಿರುವುದು. ಶಿಶುಪಾಲನೆ ರಜೆ ನೀಡಲು ಹಣ ಪಡೆದಿರುವುದು, ಅತಿಥಿ ಶಿಕ್ಷಕರಿಂದ ಹಣ ಪಡೆದಿರುವುದು, ನಿವೃತ್ತ ಶಿಕ್ಷಕರಿಂದ ಹಣ ಪಡೆದಿರುವುದು, ಹಳೇ ವಿದ್ಯಾರ್ಥಿ ಸಂಘದಿಂದ ಎಚ್.ಪಿ.ಬಿ.ಎಸ್ ಶಾಲೆಯ ಹಣವನ್ನು ವ್ಯತ್ಯಾಸ ಮಾಡಿರುವುದು. ಕ್ಷೇತ್ರ ಕ್ರೀಡಾ ಕೂಟ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಕ್ಷೇತ್ರದ ಶಾಸಕರ ಹೆಸರನ್ನು ಮುದ್ರಿಸದೇ ಶಿಷ್ಟಾಚಾರ ಉಲ್ಲಂಘನೆ ಮಾಡಿರುವುದು. ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕಿ ಕಲಾವತಿ, ಇವರಿಗೆ ರಾತ್ರಿಯ ವೇಳೆ ಫೋನ್ ಕರೆ ಮಾಡಿ ಕೊಲೆ ಮಾಡುತ್ತೇನೆಂದು ಹೆದರಿಸಿ ಕೊಲೆ ಬೆದರಿಕೆ ಹಾಕಿರುವುದು ಸೇರಿದೆ.