ಶ್ರೀರಾಮಚಂದ್ರ ಹಿಂದು ಸಂಸ್ಕೃತಿಯ ಪ್ರತೀಕ: ಶಾಸಕ ಸಿದ್ದು ಸವದಿ
Jan 21 2024, 01:31 AM ISTರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನ ವಿವಿಧ ಹಿಂದು ಸಂಘಟನೆಗಳು ಮಕ್ಕಳಿಗೆ ಶನಿವಾರ ಆಯೋಜಿಸಿದ್ದ ರಾಮ, ಸೀತಾ, ಲಕ್ಷ್ಮಣ ಮತ್ತು ಹನುಮಾನ್ ವೇಷಧಾರಿಗಳ ಸಮಾವೇಶ ನಡೆಯಿತು. ವೇದಿಕೆಯಲ್ಲಿ ಒಟ್ಟು ೧೫ ಶಾಲೆಗಳ ೫೧೦ ಮಕ್ಕಳು ವೇಷಧಾರಿಗಳಾಗಿ ಸಭಿಕರ ಮನಸೆಳೆದರು. ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಮತ್ತು ಹನುಮಂತ ಸೇರಿ ೧೧೬ ತಂಡಗಳು, ೩೬ ವಿದ್ಯಾರ್ಥಿನಿಯರು ಸೀತಾಮಾತೆ ಮತ್ತು ೧೦ ವಿದ್ಯಾರ್ಥಿಗಳು ಶ್ರೀರಾಮ ವೇಷಧಾರಿಗಳಾಗಿ ಮಿಂಚಿದರು.