ಕುಶಾಲನಗರ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
Feb 07 2024, 01:50 AM ISTಕುಶಾಲನಗರದ ಶೋರೂಮ್ ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗಲಾಟೆಯಲ್ಲಿ ಶೋರೂಮ್ ನ ಮಾಲೀಕ ಶ್ರೀನಿಧಿ, ಟೈಲರಿಂಗ್ ಮಿಷಿನ ಕತ್ತರಿಯಿಂದ ಸಾಜಿದ್ ಎಂಬಾತನಿಗೆ ಚುಚ್ಚಿದ ಪರಿಣಾಮ ಆತ ಮೃತಪಟ್ಟಿದ್ದ. ಶ್ರೀನಿಧಿಗೆ ಬೆಂಬಲವಾಗಿ ನಿಂತು ಕೊಲೆಗೆ ಪ್ರೋತ್ಸಾಹಿಸಿದ ಆತನ ಸ್ನೇಹಿತ ಆಲಿಂ ಮೇಲೆ ಕೂಡ ಕೊಲೆ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.