ಸರ್ಕಾರವೇ ಬೀದಿಗಿಳಿದು ನಾನು ಕಳ್ಳ ಅಲ್ಲ, ಕಳ್ಳ ಅಲ್ಲ ಎಂದು ಸಾರುತ್ತಿದೆ. ಹಾಗಾಗಿ ನಮ್ಮದು ಹೋರಾಟ, ಅವರದ್ದು ಬರೀ ಹಾರಾಟ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕುಹಕವಾಡಿದರು.
ನಾನು ಕ್ಲೀನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾದಲ್ಲಿ 14ನಿವೇಶನಗಳನ್ನು ನುಂಗಿ ಕ್ಲೀನ್ ಎಂದು ಹೇಗೆ ಹೇಳಿಕೊಳ್ಳುತ್ತೀರಿ. ನೀವು ಕ್ಲೀನ್ ಎನ್ನುವುದನ್ನು ಜನರು ಹೇಳಬೇಕೇ ವಿನಃ ನೀವಲ್ಲ.