ಮಠಮಾನ್ಯ, ಅನ್ನದಾತರ ಆಸ್ತಿಗೆ ಕಣ್ಣು ಹಾಕಿದ್ರೆ ಸುಮ್ಮನಿರಲ್ಲ. ವಕ್ಫ್ ಮಂಡಳಿ ರದ್ದು ಮಾಡುವಂತೆ ಗುಡುಗಿದ ಸ್ವಾಮೀಜಿಗಳು. ಸಂತರು ವಕ್ಫ್ ವಿಷಗಾಳಿ ಬೀಸಲು ಕಾಂಗ್ರೆಸ್ ಕಾರಣವೆಂದು ದೂರಿದ್ದಾರೆ. ಮಠಾಧೀಶರ ಇಂದಿನ ಹೋರಾಟಕ್ಕೆ ಜಿಲ್ಲಾ ಬಿಜೆಪಿ ಬೆಂಬಲಿಸಿತ್ತು.
ವಕ್ಫ್ ಹೆಸರಿನಲ್ಲಿ ರೈತರ ಭೂಮಿ, ಮಠ ಮಂದಿರ, ಸರ್ಕಾರಿ ಶಾಲೆಯ ಭೂಮಿಗಳನ್ನು ವಶಕ್ಕೆ ಪಡೆಯುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ವಿರೋಧಿಸಿ, ಜಿಲ್ಲಾ ಬಿಜೆಪಿ ಘಟಕದಿಂದ ಗುರುವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.