ಕಂದಾಯ ಸಚಿವ ಕೃಷ್ಣ ಭೈರೇಗೌಡ ದಿಢೀರ್ ಭೇಟಿ
Feb 07 2024, 01:46 AM ISTಕಂದಾಯ ಇಲಾಖೆ ಹೊರತಂದಿರುವ ಇ- ಆಫೀಸ್ ಆನ್ ಲೈನ್ ತೆರೆದು ತೋರಿಸಿ ಎಂದು ಸಿಬ್ಬಂದಿ ಪ್ರಶಾಂತ್ ಅವರಿಗೆ ತಿಳಿಸಿದರು. ನಾಲ್ಕೈದು ನಿಮಿಷಗಳಾದರೂ ಆನ್ ಲೈನ್ ಓಪನ್ ಆಗಲಿಲ್ಲ. ಇದರಿಂದ ಮತ್ತುಷ್ಟ ಕೋಪಗೊಂಡ ಸಚಿವರು, ನೀವುಗಳು ಈ ತಂತ್ರಜ್ಞಾನದ ಬಳಕೆ ಮಾಡುತ್ತಿಲ್ಲವೆಂದು ತಿಳಿಯಿತು. ಹಾಗಾಗಿ ಅದು ಓಪನ್ ಆಗುತ್ತಿಲ್ಲ. ಕರ್ತವ್ಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಈ ತಂತ್ರಜ್ಞಾನದ ಬಳಕೆ ಮಾಡಲು ಸೂಚಿಸಲಾಗಿದೆ. ಆದರೆ ಇಲ್ಲಿ ಅದರ ಉಲ್ಲಂಘನೆಯಾಗುತ್ತಿದೆ. ಇನ್ನೇನು ಕೆಲಸ ಮಾಡುತ್ತಿದ್ದೀರಿ? ವಿಳಂಬವಾಗಲು ನೂರಾರು ನೆಪ ಹೇಳುವ ನೀವು, ಕೆಲಸ ಮಾಡಲು ಕೇವಲ 5 ಕಾರಣ ಕೊಡಿ ನೋಡೋಣವೆಂದು ಚಾಟಿ ಬೀಸಿದರು.