ಚಂಡಮಾರುತ ಮಳೆಗೆ ಚೆನ್ನೈ ಮುಳುಗಡೆಏರ್ಪೋರ್ಟ್ಗೆ ನೀರು: ವಿಮಾನ ಹಾರಾಟ ಸ್ಥಗಿತ. ಕೊಚ್ಚಿ ಹೋದ ಕಾರು, ಬೈಕ್ಗಳು. 5 ಬಲಿ. ಆಂಧ್ರ, ಪುದುಚೇರಿ, ಒಡಿಶಾದಲ್ಲೂ ಮಳೆ ಅಬ್ಬರ. ಇಂದು ಆಂಧ್ರ ಕರಾವಳಿಗೆ ‘ಮೈಚಾಂಗ್’ ದಾಳಿ. ‘ಮೈಚಾಂಗ್’ ಚಂಡಮಾರುತದ ಪ್ರಭಾವದಿಂದ ಚೆನ್ನೈ, ಉತ್ತರ ತ.ನಾಡಲ್ಲಿ ಧಾರಾಕಾರ ಮಳೆ. 29 ಸೆಂ.ಮೀ.ವರೆಗೂ ಮಳೆ ಸುರಿದಿದ್ದರಿಂದ ಚೆನ್ನೈನಲ್ಲಿ ಭಾರಿ ಪ್ರವಾಹ ಸ್ಥಿತಿ. ಎಲ್ಲೆಲ್ಲೂ ನೀರು. ಜನವಸತಿ, ಕೈಗಾರಿಕಾ ಪ್ರದೇಶಗಳಿಗೂ ನುಗ್ಗಿದ ನೀರು. ವಿದ್ಯುತ್, ಇಂಟರ್ನೆಟ್ ಸೇವೆ ಬಂದ್. ಚೆನ್ನೈ ಏರ್ಪೋರ್ಟ್ ಜಲಾವೃತ. ವಿಮಾನ ಹಾರಾಟ ಸ್ಥಗಿತ. 35 ವಿಮಾನ ಬೆಂಗಳೂರಿಗೆ ವರ್ಗ. ಹಳಿಗಳ ಮೇಲೆ ನೀರು ಹರಿಯುತ್ತಿರುವ ಕಾರಣ ಹಲವಾರು ರೈಲುಗಳ ಸಂಚಾರವೂ ರದ್ದು. ಉತ್ತರ ತಮಿಳುನಾಡಿನ ಜಿಲ್ಲೆಗಳಲ್ಲಿ ಮಂಗಳವಾರ ಶಾಲೆಗಳಿಗೆ ರಜೆ ಘೋಷಿಸಿದ ಸರ್ಕಾರ. ತಮಿಳುನಾಡು, ಆಂಧ್ರ, ಪುದುಚೇರಿ, ಒಡಿಶಾ ಸಿಎಂಗೆ ಗೃಹ ಸಚಿವ ಅಮಿತ್ ಶಾ ಫೋನ್.