ಸತ್ಯ, ಪ್ರಾಮಾಣಿಕತೆಯಿಂದ ನಡೆದರೆ ಜೀವನ ಸುಖಮಯ: ರಂಭಾಪುರಿ ಜಗದ್ಗುರುಕಲಾದಗಿ: ಇತಿಹಾಸ ಹೇಳುತ್ತಿದೆ. ನಿನ್ನೆ ಸುಖ ಇತ್ತು ಎಂದು, ವಿಜ್ಞಾನ ಹೇಳುತ್ತಿದೆ ನಾಳೆ ಸುಖ ಇದೆ ಎಂದು. ಆದರೆ ಧರ್ಮ ಹೇಳುತ್ತದೆ ಮನುಷ್ಯನಲ್ಲಿ ಸತ್ಯ, ಪ್ರಾಮಾಣಿಕತೆಯಿಂದ ಇದ್ದರೆ ನಿತ್ಯವೂ ಸುಖ ಇದೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ,ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು. ಉದಗಟ್ಟಿ ಗ್ರಾಮದಲ್ಲಿ ಶನಿವಾರ ಮಹಾಪುರಾಣ ಮಂಗಲ ಹಾಗೂ ಧರ್ಮ ಜಾಗೃತಿ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಸರ್ವ ಕಾಲಕ್ಕೂ, ಸರ್ವ ಸಮುದಾಯಕ ಬೆಳಕು ಕೊಡುತ್ತಿರೋದು ಧರ್ಮ ಮಾತ್ರ ಎಂದರು.