ಸುಜಾತಾ ಚೌಲದ್ಗೆ ಗಣ್ಯರಿಂದ ಶುಭ ಹಾರೈಕೆಮಹಾಲಿಂಗಪುರ: ರಾಜ್ಯ ನೆಟ್ ಬಾಲ್ ತಂಡಕ್ಕೆ ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದ ಶ್ರೀ ಗುರು ಮಹಾಲಿಂಗೇಶ್ವರ ವಿದ್ಯಾವರ್ಧಕ ಸಂಘ ಪಪೂ ಕಾಲೇಜು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸುಜಾತಾ ಚೌಲದ ಆಯ್ಕೆಯಾಗಿದ್ದಾಳೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ, ಪಟ್ಟಣದ ಸಾರ್ವಜನಿಕರು ಶಾಲೆಯ ಪ್ರಾಂಗಣದಲ್ಲಿ ಸನ್ಮಾನಿಸಿ ಉತ್ತಮ ಪ್ರದರ್ಶನಕ್ಕೆ ಶುಭ ಹಾರೈಸಿದರು.