20 ಕ್ವಿಂಟಲ್ ಜೋಳ ಖರೀದಿಸುವಂತೆ ಆಗ್ರಹರೈತರಿಂದ 20 ಕ್ವಿಂಟಲ್ ಜೋಳವನ್ನು ಕಡ್ಡಾಯವಾಗಿ ಖರೀದಿ ಮಾಡಬೇಕು ಹಾಗೂ ಕೂಡಲೇ ಲಾಗಿನ್ ಓಪನ್ ಮಾಡುವಂತೆ ಒತ್ತಾಯಿಸಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ನೇತೃತ್ವದಲ್ಲಿ ವಿವಿಧ ಗ್ರಾಮಗಳ ರೈತರು ನಗರದ ಸಿಂಧನೂರು ರಸ್ತೆಯಲ್ಲಿರುವ ಖರೀದಿ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.