ದ್ವೇಷ ಹರಡುವವರು ಯಾರೇ ಆದರೂ ಬಿಡುವುದಿಲ್ಲ: ಸುಧೀರ್ ರೆಡ್ಡಿಜಿಲ್ಲೆಯಲ್ಲಿ ನಡೆದ ಕೊಲೆಗಳು, ಅಹಿತಕರ ಘಟನೆಗಳ ಕುರಿತು ವೈಜ್ಞಾನಿಕ ಸಾಕ್ಷ್ಯಗಳು, ಪಾರದರ್ಶಕತೆಯಿಂದ ಪ್ರತಿ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದೇವೆ. ಯಾವುದೇ ಆರೋಪಿ ತಪ್ಪಿಸಿಕೊಳ್ಳಲು ಬಿಡಲ್ಲ. ಅಮಾಯಕರಿಗೆ ಅನ್ಯಾಯವಾಗಲೂ ಬಿಡಲ್ಲ. ಈ ಕುರಿತು ಯಾರಿಗಾದರೂ ಅಸಮಾಧಾನ ಇದ್ದರೆ ನೇರವಾಗಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ. ಆದರೆ ಇಂಥದ್ದೇ ವಿಚಾರಗಳನ್ನಿಟ್ಟುಕೊಂಡು ಅನಗತ್ಯವಾಗಿ ದ್ವೇಷ ಹರಡುವುದಕ್ಕೆ ಅವಕಾಶ ಕೊಡಲ್ಲ. ದ್ವೇಷ ಹರಡುವವರಿಗೆ ನೋಟಿಸ್ ಕೊಡುವುದೋ, ಬಂಧನ ಮಾಡುವುದೋ- ಕಾನೂನಿನಲ್ಲಿ ಸ್ಪಷ್ಟವಾಗಿದೆ. ಅದರ ಪ್ರಕಾರ ಕ್ರಮ ಆಗಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಅವರ ಖಡಕ್ ವಾರ್ನಿಂಗ್ ನೀಡಿದರು.