ಪರಿಸರ ಸಂರಕ್ಷಣೆಯ ಕೆಲಸ ಹೃದಯದಿಂದ ಮಾಡಿ-ಪ್ರೊ. ಅರಸನಾಳಪರಿಸರ ದಿನಾಚರಣೆ ಬಂದಾಗೊಮ್ಮೆ ಕೇವಲ ಕಾಟಾಚಾರಕ್ಕೆ ಅಥವಾ ಪ್ರಚಾರಕ್ಕಾಗಿ ಕಳೆದ ವರ್ಷ ಕಡಿದ ತಗ್ಗಿನಲ್ಲಿಯೇ ಸಸಿ ನೆಟ್ಟು ನಾನೊಬ್ಬ ಪರಿಸರ ಪ್ರೇಮಿ, ಪರಿಸರ ಸಂರಕ್ಷಕ ಎಂದರೆ ತಪ್ಪಾಗುತ್ತದೆ. ಪರಿಸರ ಸಂರಕ್ಷಣೆಯ ಕೆಲಸವನ್ನು ಹೃದಯದಿಂದ ಮಾಡಬೇಕು ಎಂದು ಪರಿಸರವಾದಿ, ಗದಗ ಜಿಲ್ಲಾ ವನ್ಯಜೀವಿ ಪರಿಪಾಲಕ ಪ್ರೊ. ಸಿ.ಎಸ್. ಅರಸನಾಳ ಹೇಳಿದರು.