ಶಿವಯೋಗ ಮಂದಿರ ಶಾಖಾ ಮಠದ ಕಾರ್ಯ ಶ್ಲಾಘನೀಯ: ಜಿ. ಎಸ್. ಪಾಟೀಲಮಠಮಾನ್ಯಗಳಿಗೆ ಒಬ್ಬ ಕ್ರಿಯಾಶೀಲ ಮಠಾಧಿಪತಿ ಇದ್ದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಮಹಾಸ್ವಾಮಿಗಳೆ ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ. ಅವರ ಸಂಕಲ್ಪದಿಂದಲೇ ಇಂದು ನಿಡಗುಂದಿಕೊಪ್ಪದ ಶ್ರೀಮಠದಲ್ಲಿ ಗಜೇಂದ್ರಗಡ ತಾಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದು ಶಾಸಕ ಜಿ. ಎಸ್. ಪಾಟೀಲ ಹೇಳಿದರು.