ಪೆಂಡಾಲ್ ಗಣಪನ ಅದ್ಧೂರಿ ವಿಸರ್ಜನ ಮಹೋತ್ಸವಪೆಂಡಾಲ್ ಗಣಪತಿಯ 70ನೇ ವರ್ಷದ ವಿಸರ್ಜನಾ ಮಹೋತ್ಸವದ ಮೆರವಣಿಗೆಗೆ ಶನಿವಾರ ಬೆಳಿಗ್ಗೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ಕರ್ಪೂರ ಹಚ್ಚಿ, ಪುಷ್ಪವನ್ನು ಅರ್ಪಿಸಿ, ಕಾಯಿ ಹೊಡೆಯುವುದರ ಮೂಲಕ ಚಾಲನೆ ನೀಡಿದರು. ಸಾರ್ವಜನಿಕರು ಮೆರವಣಿಗೆ ಉದ್ದಕ್ಕೂ ಕುಣಿದು ಕುಪ್ಪಳಿಸಿದರು, ಇನ್ನು ಪೆಂಡಾಲ್ ಗಣಪತಿ ಉತ್ಸವದ ಅಂಗವಾಗಿ ನಗರದ 19ನೇ ವಾರ್ಡಿನ ಅರಳೇಪೇಟೆ ನಿವಾಸಿಗಳು, ಅಂಗಡಿ ಮಾಲೀಕರಿಂದ ಅನ್ನದಾನ, ಸಹ್ಯಾದ್ರಿ ವೃತದಲ್ಲಿ ಸೇರಿದಂತೆ ಹಲವಾರು ಕಡೆ ಅನ್ನಸಂತರ್ಪಣೆ ನಡೆಸಲಾಗಿದೆ ಎಂದು ಹೇಳಿದರು.